Koppal: ಮಹಿಳಾ ಅಧಿಕಾರಿ ಜತೆ ಬಿಜೆಪಿ ಶಾಸಕನ ಲವ್ವಿ-ಡವ್ವಿ: ವರದಿ ಕೇಳಿದ ಶಿಸ್ತು ಸಮಿತಿ

By Kannadaprabha NewsFirst Published Jan 6, 2022, 9:03 AM IST
Highlights

*  ಅಧಿಕಾರಿಯ ಸಹೋದರ-ಶಾಸಕರ ಆಡಿಯೋ ವೈರಲ್‌
*  ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ ಸಹೋದರ
*  ಸತ್ಯಾಸತ್ಯತೆ ವರದಿಯನ್ನು ಶಿಸ್ತು ಸಮಿತಿಗೆ ಸಲ್ಲಿಕೆ 
 

ಕೊಪ್ಪಳ(ಜ.06):  ಕನಕಗಿರಿ(Kanakagiri) ಶಾಸಕ ಬಸವರಾಜ ದಢೇಸುಗೂರು(Basavaraj Dadesugur ) ಹಾಗೂ ಮಹಿಳಾ ಅಧಿಕಾರಿಯ ನಡುವಿನ ಸಂಭಾಷಣೆಯ ಆಡಿಯೋ ವೈರಲ್‌(Audio Viral) ಆಗಿರುವ ಬೆನ್ನಲ್ಲೇ ಬಿಜೆಪಿ(BJP) ಶಿಸ್ತು ಸಮಿತಿ ಕೊಪ್ಪಳ(Koppal) ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಅವರಿಂದ ವರದಿ ಕೇಳಿದೆ. ಶಾಸಕರ ಹಾಗೂ ಮಹಿಳಾ ಅಧಿಕಾರಿಯ(Lady Officer) ಆಡಿಯೋ ವೈರಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಿಸ್ತು ಸಮಿತಿ ವರದಿ ಕೇಳಿದೆ. ಶಾಸಕರ ಹೇಳಿಕೆಯನ್ನೊಳಗೊಂಡು ಸತ್ಯಾಸತ್ಯತೆ ವರದಿಯನ್ನು(Report) ಶಿಸ್ತು ಸಮಿತಿಗೆ ಸಲ್ಲಿಸುವುದಾಗಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

ಮಹಿಳಾ ಅಧಿಕಾರಿಯ ಸಹೋದರ ಶಾಸಕರನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ 11.52 ನಿಮಿಷಗಳ ಆಡಿಯೋ ಸಹ ವೈರಲ್‌ ಆಗಿದ್ದು ಪ್ರಕರಣ ವಿವಿಧ ಮಜಲುಗಳನ್ನು ಪಡೆದುಕೊಂಡಿದೆ. ಇದಕ್ಕೂ ಮೊದಲು ಅಧಿಕಾರಿಯ ಸಹೋದರ ಎಂದು ಹೇಳಿಕೊಂಡಿರುವ ಸಂದೀಪ್‌ ಎನ್ನುವವರು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. 

ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ ಮರುತನಿಖೆ ಅಗತ್ಯವಿಲ್ಲ: ಎಸ್‌ಐಟಿ ಮುಖ್ಯಸ್ಥ

ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ತಮ್ಮ ಸಹೋದರಿಯ ಕುರಿತು ಹೇಳಿಕೊಂಡಿದ್ದಾರೆ. ನಮ್ಮ ಸಹೋದರಿ ಪ್ರಾಥಮಿಕ ಶಿಕ್ಷಣವನ್ನು ಗಂಗಾವತಿ ಪಡೆದಿದ್ದು ಸ್ನಾತಕೋತ್ತರ ಪದವಿ ಸಹ ಪಡೆದಿದ್ದಾರೆ. ಎರಡ್ಮೂರು ಬಾರಿ ಐಎಎಸ್‌ ಪ್ರಾಥಮಿಕ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾರೆ. ಪರಿಶಿಷ್ಟ ಜಾತಿಗೆ(Scheduled Caste) ಸೇರಿದ್ದರೂ ಸಾಮಾನ್ಯ ವರ್ಗದಲ್ಲಿಯೇ ನೌಕರಿ(Job) ಸೇರಿದ್ದಾರೆ. ಹೀಗಿರುವಾಗ ಶಾಸಕರಾದ ಮೇಲೆ ನೀವೇ ಅವರನ್ನು ನನಗೆ ಸಹಾಯ ಮಾಡಲು ಎಂದು ಕರೆತಂದಿದ್ದಿರಿ. ಅವರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ, ನೀವು ಕ್ರೂರ ವರ್ತನೆ ತೋರಿದ್ದು ಆಕೆಯ ಮದುವೆಗೂ ಅಡ್ಡಿ ಬಂದಿದ್ದೀರಿ. ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್‌(Video Viral) ಆಗುತ್ತಿದ್ದಂತೆ ಸಂದೀಪ್‌ ಅವರಿಗೆ ಕರೆ ಮಾಡಿರುವ ಶಾಸಕ ಬಸವರಾಜ ದಢೇಸುಗೂರು, ಯಾಕೆ ಈ ರೀತಿ ಮಾಡುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಏನಾದರೂ ಇದ್ದರೆ ಕುಳಿತುಕೊಂಡು ಮಾತನಾಡುವ ಬನ್ನಿ ಎಂದು ಕರೆದಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂದೀಪ್‌ ಅವಾಚ್ಯ ಶಬ್ದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದ ಮೊದಲು ತಮ್ಮ ಅಂತಿದ್ದೆ. ನಾನು ಅಣ್ಣಾ ಅಂತಿದ್ದೆ. ಆದರೆ, ಕುಡಿದಾಗ ಅಳಿಯಾ ಅಂದ್ಬಿಟ್ಟೆ. ನನಗೆ ಯಾರು ಹಿರಿಯ ಇಲ್ಲ. ನಾನೇ ಹಿರಿಯ. ನಿನಗೆ ಯಾರು ಹಿರಿಯ ಇದ್ದಾರೆ ಹೇಳು. ಇದಲ್ಲದೆ ನಿನ್ನನ್ನು ಸೋಲಿಸುತ್ತೇನೆ. ನಿನ್ನನ್ನು ಇಲ್ಲಿ ಇರಲು ಬಿಡುವುದಿಲ್ಲ. ಕನಕಗಿರಿ ಕ್ಷೇತ್ರ ಬಿಡುಸುತ್ತೇನೆ ಎಂದು ಅಬ್ಬರಿಸಿದ ಆಡಿಯೋದಲ್ಲಿ ಹರಿಹಾಯ್ದಿದ್ದಾರೆ.

ಕೇಂದ್ರ ಸಚಿವಗೂ ಸಿಡಿ ಭೀತಿ: ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ತಂದ ಸದಾನಂದಗೌಡ

ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಅವರ ಆಡಿಯೋ ವೈರಲ್‌ ಆಗಿರುವ ಕುರಿತು ಪಕ್ಷದ ಶಿಸ್ತು ಸಮಿತಿ ವರದಿ ಕೇಳಿದ್ದು, ಕಳುಹಿಸಿಕೊಡಲಾಗುವುದು ಅಂತ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ(Doddanagouda Patil) ತಿಳಿಸಿದ್ದಾರೆ. 

ಶಾಸಕನ ಲವ್ವಿ-ಡವ್ವಿ ಬಹಿರಂಗ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕೊಪ್ಪಳ(Koppal) ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಫೋನ್​ ಸಂಭಾಷಣೆಯ ಆಡಿಯೋ ಫುಲ್​​​ ವೈರಲ್​​​​ ಆಗಿದ್ದು, ನೀನ್​​​​ ನನಗೆ ಕೊಟ್ಟ ಮಾತಿಗೆ ತಪ್ಪಿದ್ದೀಯ. ನನ್ನ ಬಳಿ ಬರದಿದ್ರೆ ಕಚೇರಿ ಬಳಿ ಬರ್ತೀನಿ, ರಂಪಾಟ ಮಾಡ್ತೀನಿ ಎಂದು ಮಹಿಳಾ ಅಧಿಕಾರಿ ಆಡಿಯೋದಲ್ಲಿ ಮಾತನಾಡಿದ್ದಾರೆ. ದಮ್ಮಯ್ಯಾ ಅಲ್ಲಿಗೆ ಬರ್ಬೇಡಾ. ನಾನಿರೋ ಕಡೆ ಬಾ ಎಂದು  ಬಸವರಾಜ ದಢೇಸ್ಗೂರು ಮನವಿ ಮಾಡಿಕೊಂಡಿರೋ ಸುಮಾರು ಐದಾರು ನಿಮಿಷದ ಆಡಿಯೋ ವೈರಲ್ ಆಗಿದೆ.
 

click me!