ಬೀದರ್‌ನಲ್ಲಿ ಬಿಗುವಿನ ವಾತಾವರಣ, ಲವ್‌ಜಿಹಾದ್‌ಗೆ ಬಾಲಕಿ ಬಲಿಯಾದಳಾ?

Published : Dec 19, 2018, 04:40 PM ISTUpdated : Dec 19, 2018, 04:41 PM IST
ಬೀದರ್‌ನಲ್ಲಿ ಬಿಗುವಿನ ವಾತಾವರಣ, ಲವ್‌ಜಿಹಾದ್‌ಗೆ ಬಾಲಕಿ ಬಲಿಯಾದಳಾ?

ಸಾರಾಂಶ

ಬೀದರ್‌ ನಲ್ಲಿ ಹಿಂದೂ ಹುಡುಗಿ ಅಪಹರಣ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಪ್ರಕರಣ ಲವ್ ಜಿಹಾದ್ ಸ್ವರೂಪ ಪಡೆಯುತ್ತಿದ್ದು ಒಂದು ಕಡೆ ಜನರು ಪೊಲೀಸ್ ಇಲಾಖೆ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದರೆ ಅತ್ತ ಮುಸ್ಲಿಂ ಸಮುದಾಯ ಸಹ ಭಯದ ನೆರಳಿನಲ್ಲಿ ಬದುಕುವಂತೆ ಆಗಿದೆ.

ಬೀದರ್(ಡಿ.19) ಹಿಂದೂ ಬಾಲಕಿಯನ್ನ ಮುಸ್ಲಿಂ ಯುವಕ ಅಪಹರಣ  ಮಾಡಿದ್ದಾನೆ ಎನ್ನಲಾದ ಪ್ರಕರಣದ ಪರಿಣಾಮ ಡೊಣಗಾಂವ್ ಗ್ರಾಮದಲ್ಲಿ ಪರಿಸ್ಥಿತಿ ಬೂದ೦ ಮುಚ್ಚಿದ ಕೆಂಡದಂತಾಗಿದೆ.

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡೊಣಗಾಂವ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಒಂದು ವಾರದ ಹಿಂದೆ ಹಿಂದೂ ಹುಡುಗಿಯನ್ನ ಮುಸ್ಲಿಂ ಯುವಕ ಅಲಾವುದ್ದೀನ್ ಅಪಹರಿಸಿ ನಾಪತ್ತೆಯಾಗಿದ್ದಾನೆ ಎನ್ನುವುದು ಆರೋಪ.

ದೇಶ ನಡುಗಿಸಿದ್ದ ಮುಂಬೈ ದಾಳಿಯ ಹಿಂದಿದೆ ಲವ್‌ ಜಿಹಾದ್‌!

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಗಳನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಪೊಲೀಸರಿಗೆ ನಾಗರಿಕರು ಎರಡು ದಿನಗಳ ಗಡವು ನೀಡಿದ್ದಾರೆ. ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು  ಮುಸ್ಲಿಂ ಸಮುದಾಯದವರು ಮನೆ ಖಾಲಿ ಮಾಡುತ್ತಿದ್ದಾರೆ.

PREV
click me!

Recommended Stories

ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ