ಬೆಂಗಳೂರಿಗೆ ಬರಲಿದೆ ಏರ್‌ಬಸ್‌ ಸೇವೆ

By Web DeskFirst Published Nov 16, 2019, 8:23 AM IST
Highlights

ಏರ್ ಬಸ್ ಸೇವೆಗೆ ಸೇವೆಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಲಾಗಿದೆ. 

ಬೆಂಗಳೂರು [ನ.16]:  ಏರ್‌ಬಸ್‌ ಸಂಸ್ಥೆಯ ವ್ಯವಸ್ಥಾಪಕ ನಿದೇರ್ಶಕ ಆನಂದ್‌ ಸ್ಟಾನಿಲ್ ನೇತೃತ್ವದ ತಂಡ ನಗರದ ಡಾಲರ್ಸ್‌ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಚಿರ್ಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಏರ್‌ಬಸ್‌ ಸಂಸ್ಥೆ ಸೇವೆಗೆ ಬೆಂಗಳೂರು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ. ಏರೋ ಸ್ಪೇಸ್ ಕ್ಯಾಪಿಟಲ್‌ ಆಗಿ ಗುರುತಿಸಿಕೊಂಡಿರುವ ಬೆಂಗಳೂರು ನಗರವನ್ನು ಹೂಡಿಕೆಗೆ ಆಯ್ಕೆ ಮಾಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ರಾಜ್ಯ ಸಕಾರ್ರವು ಸಂಸ್ಥೆಗೆ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಏರ್‌ಬಸ್‌ ಇಂಡಿಯಾ ವ್ಯವಸ್ಥಾಪಕ ನಿದೇರ್ಶಕ ಆನಂದ್‌ ಸ್ಟಾನಿಲ್ ಹಾಗೂ ಚೀಫ್‌ ಟೆಕ್ನಿಕಲ್‌ ಆಫೀಸರ್‌ ಗ್ರಾಜಿಯಾ ವಿಟ್ಟಡಿನಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅಭಿನಂದಿಸಿದರು.

click me!