Bengaluru ಪತಿ ಸಾವು,ನಾನು ಮುಟ್ಟೇ ಇಲ್ಲ ಅಂತಿರೋ ಪತ್ನಿ, ಆತ್ಮ*ಹ*ತ್ಯೆಯೋ, ಕೊ*ಲೆಯೋ? ಸತ್ಯ ಹೇಳಲಿದೆ ಆ ಪರೀಕ್ಷೆ!

Published : Apr 14, 2026, 04:57 PM IST
bengaluru Mallathahalli Case

ಸಾರಾಂಶ

ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದ ತೌಸಿಬ್ ಪಾಷ ಅವರ ಸಾವಿನ ಪ್ರಕರಣವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಗೊಂದಲ ಸೃಷ್ಟಿಸಿದೆ. ಪತ್ನಿ ಸೋಹನಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದರೆ, ಮೃತನ ದೇಹದಲ್ಲಿ ಚಾಕು ಇರಿತದ ಗುರುತುಗಳಿರುವುದರಿಂದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಆಕೆಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಚಲನ ಮೂಡಿಸಿರುವ ಆತ್ಮ*ಹ*ತ್ಯೆ ಪ್ರಕರಣವೊಂದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.   ನಗರದ  ಮಾರತಹಳ್ಳಿ ಪ್ರದೇಶದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರಿಸಲು ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ.

ಕಳೆದ ಗುರುವಾರ ನಡೆದ ಈ ಪ್ರಕರಣದಲ್ಲಿ, ತೌಸಿಬ್ ಪಾಷ ಎಂಬ ವ್ಯಕ್ತಿ ತನ್ನ ಪತ್ನಿ ಸೋಹನಾ ಕಿರುಕುಳಕ್ಕೆ ಬೇಸತ್ತು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಮೃತನ ಪೋಷಕರು ಪತ್ನಿ ಸೋಹನಾ ಹಾಗೂ ಆಕೆಯ ಮನೆಯವರ ಮೇಲೆ ಗಂಭೀರ ಆರೋಪ ಹೊರಿಸಿ, ಇದು ಆತ್ಮ*ಹ*ತ್ಯೆಯಲ್ಲ, ಕೊಲೆ ಎಂದು ದೂರಿದ್ದಾರೆ. ತೌಸಿಬ್ ಪಾಷನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ನಾನು ಅವರನ್ನು ಮುಟ್ಟಲೇ ಇಲ್ಲ ಎಂದ ಪತ್ನಿ

ಈ ಹಿನ್ನೆಲೆಯಲ್ಲಿ  ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪತ್ನಿ ಸೋಹನಾ ಸೇರಿದಂತೆ ಆಕೆಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ವೇಳೆ ಸೋಹನಾ, “ನಾನು ಅವರನ್ನು ಮುಟ್ಟಲೇ ಇಲ್ಲ. ಅವರು ತಾವೇ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿಕೆ ನೀಡಿದ್ದಾಳೆ. ಪೊಲೀಸರು ಎಷ್ಟೇ ಪ್ರಶ್ನೆ ಮಾಡಿದರೂ, ತಮ್ಮ ಮೇಲೆ ಇರುವ ಆರೋಪಗಳನ್ನು ನಿರಾಕರಿಸುತ್ತಲೇ ಇದ್ದಾಳೆ.

ಇನ್ನೊಂದೆಡೆ, ವೈದ್ಯಕೀಯ ವರದಿಯಲ್ಲಿ ತೌಸಿಬ್ ಪಾಷನ ದೇಹದಲ್ಲಿ ಮೂರು ಕಡೆಗಳಲ್ಲಿ ಚಾಕು ಇರಿತದ ಗುರುತುಗಳು ಕಂಡುಬಂದಿವೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಆತ್ಮ*ಹ*ತ್ಯೆ ಮಾಡಿಕೊಳ್ಳುವಾಗ ಇಷ್ಟು ಆಳವಾದ ಮತ್ತು ಅನೇಕ ಇರಿತಗಳನ್ನು ತಾನೇ ಮಾಡಿಕೊಂಡಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಪತ್ನಿ ಸೋಹನಾಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ತಯಾರಿ

ಈ ಗೊಂದಲಕಾರಿ ಪರಿಸ್ಥಿತಿಯಲ್ಲಿ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಪಾಲಿಗ್ರಾಫ್ ಟೆಸ್ಟ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಕೋರ್ಟ್ ಅನುಮತಿ ನೀಡಿದ ನಂತರ, ಪತ್ನಿ ಸೋಹನಾಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.

ಪಾಲಿಗ್ರಾಫ್ ಟೆಸ್ಟ್‌ನಲ್ಲಿ ವ್ಯಕ್ತಿಯೊಬ್ಬನು ಪ್ರಶ್ನೆಗಳಿಗೆ ಉತ್ತರಿಸುವಾಗ ಅವನ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟದ ಪ್ರಮಾಣ ಇತ್ಯಾದಿ ದೈಹಿಕ ಪ್ರತಿಕ್ರಿಯೆಗಳ ಆಧಾರದ ಮೇಲೆ ಸುಳ್ಳು ಅಥವಾ ಸತ್ಯ ಹೇಳುತ್ತಿದಾನೆಯೆಂಬುದನ್ನು ವಿಶ್ಲೇಷಿಸಲಾಗುತ್ತದೆ.

ಒಟ್ಟಾರೆ, ಆತ್ಮ*ಹ*ತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಸುತ್ತುವರೆದಿರುವ ಈ ಪ್ರಕರಣದಲ್ಲಿ ಪಾಲಿಗ್ರಾಫ್ ಪರೀಕ್ಷೆಯ ಫಲಿತಾಂಶವೇ ಪ್ರಮುಖ ಸುಳಿವಾಗುವ ಸಾಧ್ಯತೆ ಇದೆ. ಈ ಘಟನೆ ನಗರದಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ತನಿಖೆ ಹೇಗೆ ಮುಂದುವರಿಯಲಿದೆ ಎಂಬುದನ್ನು ಎಲ್ಲರೂ ಕಾದುನೋಡುತ್ತಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು 14 ವರ್ಷದ ಮಗಳ ಉಸಿರುಗಟ್ಟಿಸಿ ಕೊಂದ ತಾಯಿ, ಬಳಿಕ ಅದೇ ಕೋಣೆಯಲ್ಲಿ ನೇಣಿಗೆ ಶರಣು!
'ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ'; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್!