ಬೆಂಗಳೂರು: ಎಂಬಿಎ ಪರೀಕ್ಷೆಯಲ್ಲಿ ಅನುತ್ತೀರ್ಣ, ಉಡುಪಿ ಮೂಲದ ಯುವಕ ಲೆಟರ್ ಬರೆದಿಟ್ಟು ನಾಪತ್ತೆ!

Published : Sep 07, 2025, 06:59 PM IST
Bengaluru MBA Student from Udupi  Missing

ಸಾರಾಂಶ

ಎಂಬಿಎ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ 25 ವರ್ಷದ ಯುವಕ ಕಾರ್ತಿಕ್ ಮನೆ ಬಿಟ್ಟು ಹೋಗಿದ್ದಾರೆ. ಪೋಷಕರ ನಿರೀಕ್ಷೆ ಹುಸಿಯಾಗಿದೆ ಎಂದು ಬರೆದಿಟ್ಟು ತೆರಳಿದ ಕಾರ್ತಿಕ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಬೆಂಗಳೂರು: ಎಂಬಿಎ ಪರೀಕ್ಷೆಯಲ್ಲಿ ಫೇಲ್ ಆಗಿರುವ ಹಿನ್ನೆಲೆಯಲ್ಲಿ ಪತ್ರ ಬರೆದು ಮನೆ ಬಿಟ್ಟು ಹೋಗಿರುವ 25 ವರ್ಷದ ಯುವಕ ಕಾರ್ತಿಕ್ ಕಾಣೆಯಾಗಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಮೂಲದ ಕಾರ್ತಿಕ್ ಕಳೆದ ಕೆಲವು ವರ್ಷಗಳಿಂದ ಕೆ.ಆರ್.ಪುರಂ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಆತ, ಕುಟುಂಬದ ಏಕೈಕ ಆಧಾರವಾಗಿದ್ದನು.

ಶಿಕ್ಷಣ ಮತ್ತು ಪೋಷಕರ ನಿರೀಕ್ಷೆಗಳು

  • ಸುಮಾರು ನಾಲ್ಕು ವರ್ಷಗಳ ಹಿಂದೆ ಕಾರ್ತಿಕ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಎ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು.
  • ಪೋಷಕರು ಅವರ ವಿದ್ಯಾಭ್ಯಾಸಕ್ಕೆ 12 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು.
  • ಕಾರ್ತಿಕ್, ಎರಡು ವರ್ಷಗಳ ನಂತರ ಎಂಬಿಎ ಪೂರೈಸಿದ್ದೇನೆ ಎಂದು ಹೇಳಿದ್ದರೂ, ವಾಸ್ತವದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ.
  • ಈ ನಡುವೆ ಬಿ.ಕಾಂ ಆಧಾರದ ಮೇಲೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಎಂಬಿಎ ಮರುಪರೀಕ್ಷೆಯ ಫಲಿತಾಂಶ ಬಂದಾಗ ಕಾರ್ತಿಕ್ ಮತ್ತೆ ಅಯೋಗ್ಯ ಎನಿಸಿಕೊಂಡಿದ್ದರು. ಈ ಆಘಾತವನ್ನು ತಾಳಲಾಗದೆ, ಆತ್ಮನಿಂದನೆಗೊಂಡ ಕಾರ್ತಿಕ್ ಪತ್ರ ಬರೆದು ಮನೆಯಿಂದ ಹೊರಟಿದ್ದಾರೆ.

ಕಾರ್ತಿಕ್ ಬರೆದ ಪತ್ರದಲ್ಲಿ ಹೀಗಿದೆ:

  • ನಾನು ನಿಮ್ಮಂತಹ ಒಳ್ಳೆಯ ಪೋಷಕರಿಗೆ ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ.
  • ನಾನು ಎಂಬಿಎ ಪಾಸ್ ಆಗದಿರುವುದು ಮನೆ ಬಿಟ್ಟು ಹೋಗಲು ಕಾರಣ.
  • ನೀವು ನನಗಾಗಿ 12 ಲಕ್ಷ ಹಣ ವ್ಯಯಿಸಿದ್ದೀರಿ. ಆದರೆ ನಾನು ಅದರ ಬೆಲೆ ತಂದುಕೊಡಲಿಲ್ಲ.
  • ಜೊತೆಗೆ ಯಾರಿಗೆ ಹಣ ಕೊಡಬೇಕೋ ಅದರ ವಿವರವನ್ನು ಬರೆದಿಟ್ಟಿದ್ದೇನೆ.

ಈ ಪತ್ರ ಬರೆದ ನಂತರ, ಸೆಪ್ಟೆಂಬರ್ 5ರಂದು ಬೆಳಿಗ್ಗೆ ತನ್ನ ರೂಮ್‌ನಿಂದ ಹೊರಟ ಕಾರ್ತಿಕ್, ರಾಮಮೂರ್ತಿನಗರ ಬಳಿಯ ಆಲದಮರ ಬಸ್‌ಸ್ಟಾಪ್‌ನಲ್ಲಿ ಬಸ್ ಹತ್ತಿ ಹೊರಟಿರುವುದಾಗಿ ಶಂಕಿಸಲಾಗಿದೆ.

ಮೊಬೈಲ್‌ಗಳನ್ನು ಬಿಟ್ಟು ತೆರಳಿದ ಕಾರ್ತಿಕ್

ಕಾರ್ತಿಕ್ ತನ್ನ ಕಂಪನಿಯ ಮೊಬೈಲ್ ಹಾಗೂ ಖಾಸಗಿ ಮೊಬೈಲ್ ಎರಡನ್ನೂ ರೂಮ್‌ನಲ್ಲೇ ಬಿಟ್ಟು ಹೊರಟಿದ್ದಾರೆ. ಇದರಿಂದ ಪೋಷಕರ ಆತಂಕ ಇನ್ನಷ್ಟು ಹೆಚ್ಚಾಗಿದೆ. ಕಾರ್ತಿಕ್ ಅವರ ತಂದೆ ಚಂದ್ರಶೇಖರ್ ಶೆಟ್ಟಿ, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಗನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಪೋಷಕರು ಸಾರ್ವಜನಿಕರಿಗೆ ಮನವಿ ಮಾಡಿದ್ದು ಹೀಗಾಗಿದೆ. ನಮ್ಮ ಮಗ ಕಾರ್ತಿಕ್ ಎಲ್ಲಿಯಾದರೂ ಕಾಣಿಸಿಕೊಂಡರೆ ದಯವಿಟ್ಟು 9731605054 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರುತ್ತೇವೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ