ಓರ್ವ ಶಾಸಕಿ: ಮನೆ ಮಂದಿ ಎಲ್ಲರೂ ಸರ್ಕಾರಿ ಕಾಮಗಾರಿ ಗುದ್ದಲಿ ಪೂಜೆ ಮಾಡ್ತಾರೆ!

Published : Jun 25, 2019, 04:23 PM IST
ಓರ್ವ ಶಾಸಕಿ: ಮನೆ ಮಂದಿ ಎಲ್ಲರೂ ಸರ್ಕಾರಿ ಕಾಮಗಾರಿ ಗುದ್ದಲಿ ಪೂಜೆ ಮಾಡ್ತಾರೆ!

ಸಾರಾಂಶ

ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಶಂಕುಸ್ಥಾಪನೆ ಅಥವಾ ಉದ್ಘಾಟನೆ ಮಾಡುವುದು  ಶಿಷ್ಟಾಚಾರ. ಆದ್ರೆ ಕಾಂಗ್ರೆಸ್ ಶಾಸಕಿಯ ಮನೆ ಮಂದಿ ಎಲ್ಲರೂ ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.

ಬೆಳಗಾವಿ, (ಜೂ.25): ಕುಟುಂಬದವರು ಓರ್ವ ಶಾಸಕರು ಇದ್ದಾರೆ ಎನ್ನುವ ಕಾರಣಕ್ಕೆ ಮನೆ ಮಂದಿ ಎಲ್ರೂ ಸರ್ಕಾರಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡ್ತಾರೆ.

ಹೌದು..ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವ ವಿಷಯ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಶಾಸಕನಲ್ಲ, ಆದ್ರೂ ಸರ್ಕಾರಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡ್ತಾರೆ! ಯಾರಿವರು?

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ‌ಹೆಬ್ಬಾಳ್ಕರ್ ಅವರು ಕ್ಷೆತ್ರದಲ್ಲಿ ಇಲ್ಲದಿದ್ದಾಗ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಕಾಮಗಾರಿಗಳಿಗೆ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘನೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ.

ಉಚಗಾಂವ್ ಗ್ರಾಮ, ಹಿಂಡಲಗಾ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿರುವ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಹಿಂದೆ ಶಾಸಕಿ  ಲಕ್ಷ್ಮೀ ‌ಹೆಬ್ಬಾಳ್ಕರ್ ಅವರ  ಪುತ್ರ ಮೃಣಾಲ್‌ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಲಕ್ಷ್ಮೀ ಸಹೋದರ ಸರದಿ.

ಕ್ಷೇತ್ರದ ಶಾಸಕಿಯಾಗಿ ಇದ್ದುಕೊಂಡು ತಮ್ಮ ಸಹೋದರ, ಪುತ್ರನ ಕೈಯಿಂದ ಬೇಕಂತಲೇ ಗುದ್ದಲಿ ಪೂಜೆ ಮಾಡಿಸುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

PREV
click me!

Recommended Stories

Monsoon Failure: ಚಾಮರಾಜನಗರದಲ್ಲಿ ಏನಾಗುತ್ತಿದೆ? 70 ಸಾವಿರ ಹೆಕ್ಟೇರ್ ಭೂಮಿ ಇನ್ನೂ ಖಾಲಿ!
ಗರ್ಲ್‌ಫ್ರೆಂಡ್‌ ಜೊತೆ ಕ್ಲಿನಿಕ್‌ಗೆ ಬಂದು, ಈಗ ಕರ್ನಾಟಕದಲ್ಲಿ ಪರ್ಮನೆಂಟ್ ಸೆಟಲ್‌ ಆದ Hardik Pandya!