ಬಿಎಸ್‌ವೈ ಮೀಸಲು ನೀಡದಿದ್ದರೆ ಮತ್ತಾರೂ ಕೊಡಲ್ಲ: ಪಂಚಮಸಾಲಿ ಶ್ರೀ

By Kannadaprabha NewsFirst Published Dec 14, 2020, 3:38 PM IST
Highlights

ಮೀಸಲಾತಿಯಿಂದ ಪಂಚಮಸಾಲಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಉಪಯೋಗವಾಗಲಿದೆ ಎನ್ನುವ ದೂರದೃಷ್ಟಿಯಿಟ್ಟುಕೊಂಡು ನಾವು ಹೋರಾಟ ಮಾಡುತ್ತಿದ್ದೇವೆ|ನಮ್ಮ ಸಮುದಾಯದ ಬೇಡಿಕೆಯ ಪ್ರಕಾರ ರಾಜ್ಯ ಸರ್ಕಾರ ಮೀಸಲಾತಿ ನೀಡದಿದ್ದರೆ ಅನುದಾನ ವಾಪಸ್‌ ಕೊಡುತ್ತೇವೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ| 

ಕಾರಟಗಿ(ಡಿ.14): ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕಾರ್ಯ ಮಾಡದಿದ್ದರೆ ಮತ್ತಾರೂ ಮಾಡುವುದು ತೀರಾ ಕಷ್ಟ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಕಾರಟಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಯಿಂದ ಪಂಚಮಸಾಲಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಉಪಯೋಗವಾಗಲಿದೆ ಎನ್ನುವ ದೂರದೃಷ್ಟಿಯಿಟ್ಟುಕೊಂಡು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

'ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಇಲ್ಲದಿದ್ರೆ ಡಿ. 23ರಿಂದ ಬೆಂಗಳೂರು ಚಲೋ'

ರಾಜ್ಯದಲ್ಲಿನ ಅನೇಕ ಮಠಮಾನ್ಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಆ ಪೈಕಿ ಪಂಚಮಸಾಲಿ ಪೀಠವೂ ಒಂದು. ನಮ್ಮ ಸಮುದಾಯದ ಬೇಡಿಕೆಯ ಪ್ರಕಾರ ರಾಜ್ಯ ಸರ್ಕಾರ ಮೀಸಲಾತಿ ನೀಡದಿದ್ದರೆ ಅನುದಾನ ವಾಪಸ್‌ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ. 
 

click me!