ಅಯ್ಯಪ್ಪಸ್ವಾಮಿ ದೇಗುಲದ ಸಿಬ್ಬಂದಿ ದೇವಾಲಯದ ಒಳಗೆ ನೇಣಿಗೆ ಶರಣು

By Kannadaprabha NewsFirst Published Nov 10, 2020, 12:43 PM IST
Highlights

ಅಯ್ಯಪ್ಪ ಸ್ವಾಮಿ ದೇಗುಲದ ಸಿಬ್ಬಂದಿ ದೇವಾಲಯದ ಒಳಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. 

ಬೇಲೂರು (ನ.10):  ಪಟ್ಟಣದ ನೆಹರೂ ನಗರದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ರಾತ್ರಿ ನಡೆದಿದೆ. 

ಬಂಗಾಳ ರಾಜ್ಯದ ಡಾರ್ಜಿಲಿಂಗ್‌ನ ಶಿವು ಕಾಂಡಿತ್‌(45) ನೇಣಿಗೆ ಶರಣಾದವರು. 

ಈ ಬಗ್ಗೆ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ಯಮಸಂ​ ಪಾಪು, ಶಿವು ಕಾಂಡಿತ್‌ 6 ವರ್ಷದಿಂದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು. 

ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿ​ಣಿ! ..

ನಮ್ಮ ಮನೆ ಮಗನಂತೆ ಇದ್ದು ಒಳ್ಳೆಯ ವ್ಯಕ್ತಿಯಾಗಿದ್ದರು. ಆದರೆ ವಿಪರೀತ ಕುಡಿತದ ಚಟ ಇತ್ತು. ಕುಡಿದು ದೇವಾಲಯದ ಒಳಗೆ ನೇಣು ಹಾಕಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದರು. ಪಿಎಸ್‌ಐ ಕಾವ್ಯಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!