ಧರ್ಮಸ್ಥಳಕ್ಕೆ ತೆರಳಬೇಕಿದ್ದ ಸಿಎಂ ಮಾರ್ಗ ಬದಲಾಯಿಸಿದ್ದು ಯಾಕೆ?

Published : Aug 13, 2018, 07:47 PM ISTUpdated : Sep 09, 2018, 08:33 PM IST
ಧರ್ಮಸ್ಥಳಕ್ಕೆ ತೆರಳಬೇಕಿದ್ದ ಸಿಎಂ ಮಾರ್ಗ ಬದಲಾಯಿಸಿದ್ದು ಯಾಕೆ?

ಸಾರಾಂಶ

ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಿಎಂ ಕುಮಾರಸ್ವಾಮಿ ಮಾರ್ಗ ಬದಲಾಯಿಸಿದ್ದಾರೆ. ಅನಿವಾರ್ಯ ಕಾರಣದಿಂದ ಹಾಸನ ಸಕಲೇಶಪುರ ಮಾರ್ಗದಲ್ಲಿ ಧರ್ಮಸ್ಥಳಕ್ಕೆ ತೆರಳಬೇಕಿದ್ದ ಸಿಎಂ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ಹಾಸನ[ಆ.13] ತಂದೆ‌ ದೇವೇಗೌಡ,ತಾಯಿ ಚೆನ್ನಮ್ಮ,ಪತ್ನಿ ಅನಿತಾ ಜೊತೆಗೆ ಧರ್ಮಸ್ಥಳದತ್ತ ಪ್ರಯಾಣ ಬೆಳೆಸುತ್ತಿದ್ದ ಕುಮಾರಸ್ವಾಮಿ ಮಾರ್ಗ ಬದಲಾಯಿಸಿದ್ದಾರೆ. ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿ ಪ್ರಯಾಣಕ್ಕೆ ಅಡ್ಡಿ ಉಂಟಾಗಿದ್ದರಿಂದ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.

 ಹಾಸನ,ಬೇಲೂರು,ಮೂಡಿಗೆರೆ ಮಾರ್ಗದಲ್ಲಿ ಚಾರ್ಮಾಡಿಘಟ್ ತಲುಪಿ ಧರ್ಮಸ್ಥಳದಕ್ಕೆ ಪ್ರಯಾಣ ಮಾಡಿದ್ದು ಧರ್ಮಸ್ಥಳ ತಲುಪಿದ್ದಾರೆ. ಭಾರೀ ಮಳೆಯಿಂದ ಗುಡ್ಡ ಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಬಂದ್ ಆಗಿತ್ತು.

PREV
click me!

Recommended Stories

Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು
ಹೊಳೆನರಸೀಪುರ ದೇಗುಲದ ರಥದ ಬಟ್ಟೆ ವಿಚಾರಕ್ಕೆ ಕಿತ್ತಾಡಿಕೊಂಡ ರೇವಣ್ಣ-ಶ್ರೇಯಸ್ ಪಟೇಲ್, ಬರೇ ಹೂವಿನ ಅಲಂಕಾರದಲ್ಲೇ ಸಂಪನ್ನಗೊಂಡ ರಥೋತ್ಸವ