ಕಾರವಾರ: ದೋಣಿ ಮುಳುಗಿ 8 ಮಂದಿ ದುರ್ಮರಣ

Published : Jan 21, 2019, 04:20 PM ISTUpdated : Jan 21, 2019, 04:38 PM IST
ಕಾರವಾರ: ದೋಣಿ ಮುಳುಗಿ 8 ಮಂದಿ ದುರ್ಮರಣ

ಸಾರಾಂಶ

ಕರ್ನಾಟಕದ ರತ್ನ ತುಮಕೂರಿನ ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ಇಡೀ ರಾಜ್ಯವೇ ಕಣ್ಣೀರು ಸುರಿಸುತ್ತಿದೆ. ಇದರ ಬೆನ್ನಲ್ಲೇ ಕಾರವಾರದಲ್ಲಿ ದೊಡ್ಡ ದುರಂತವೇ ಸಂಭವಿಸಿದೆ.

ಕಾರವಾರ, (ಜ.21): ಕೂರ್ಮಗಡದ ನರಸಿಂಹ ಜಾತ್ರೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 8 ಮಂದಿ ಮೃತಪಟ್ಟಿದ್ದಾರೆ.

ದೋಣಿಯಲ್ಲಿ ಸುಮಾರು 22 ಜನರಿದ್ದರು ಎನ್ನಲಾಗಿದೆ. ಇವರೆಲ್ಲ ಕೂರ್ಮಗಡ ಜಾತ್ರೆಗೆ ಹೋಗಿ ವಾಪಸ್​ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ದುರಂತದಲ್ಲಿ ಮೃತಪಟ್ಟ ಎಂಟು  ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. 

ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್​ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೂರ್ಮಗಡ ಒಂದು ಅರಬ್ಬಿ ಸಮುದ್ರದ ದ್ವೀಪವಾಗಿದ್ದು, ಕಾರವಾರದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿದೆ.

PREV
click me!

Recommended Stories

Uttara kannada ಇತಿಹಾಸಕ್ಕೆ ಹೊಸ ತಿರುವು ನೀಡಿದ ಹೊನ್ನಾವರ ಕಡತೋಕೆ ಶಾಸನದ ಮರು ಸಂಶೋಧನೆ!
ಕರಾವಳಿ ರೈಲು: ಮಂಗಳೂರು-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!