ಲಡಾಖ್‌‌ನತ್ತ ಯುವಕರ ಸಾಹಸಿ ಪ್ರಯಾಣ: ಕಾರವಾರದ ಯುವಕರು ಬದುಕಿ ಬಂದದ್ದೇ ಪವಾಡ

By Govindaraj SFirst Published Jul 15, 2023, 1:21 PM IST
Highlights

ಬೈಕ್ ಏರಿ ಉತ್ತರ ಭಾರತದ ಸುಂದರ ಸ್ಥಳಗಳನ್ನು ಸುತ್ತುವ ಕನಸ್ಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊಂದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ.

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಜು.15): ಬೈಕ್ ಏರಿ ಉತ್ತರ ಭಾರತದ ಸುಂದರ ಸ್ಥಳಗಳನ್ನು ಸುತ್ತುವ ಕನಸ್ಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊಂದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಪ್ರಯಾಣದುದ್ದಕ್ಕೂ ಹಲವು ಅಡೆತಡೆಗಳನ್ನು ಎದುರಿಸಿ ಇದೀಗ ಸುರಕ್ಷಿತವಾಗಿ ಮರಳಿರುವ ಯುವಕರ ತಂಡ ತಮಗಾದ ಭಯಾನಕ ಅನುಭವಗಳನ್ನು ಬಿಚ್ಚಿಟ್ಟಿದೆ.‌ ಲಡಾಖ್‌ ನಂತಹ ಸಾಹಸಿ ಪ್ರದೇಶಗಳಿಗೆ  ತೆರಳಲು ಅದೆಷ್ಟೋ ಜನರು ಎದುರು ನೋಡುತ್ತಿರುತ್ತಾರೆ. 

Latest Videos

ಇಂತಹದ್ದೇ ಕನಸಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಹಿಮಾಚಲ ಪ್ರದೇಶದಲ್ಲಿ ಎದುರಾದ ಪ್ರವಾಹದಿಂದ ಅದೃಷ್ಟವಶಾತ್ ಪಾರಾಗಿ ತವರಿಗೆ ಮರಳಿದ್ದಾರೆ. ಕಾರವಾರದ ಪ್ರಕಾಶ ನಾಯ್ಕ, ದರ್ಶನ ಭುಜಲೆ, ವೃಷಭ ಕಾಮತ್, ಅಲಿಸಾಬ್ ಕುಕ್ಕಳ್ಳಿ ಹಾಗೂ ಕುಮಟಾದ ಅಲ್ಮಾಬ್ರೂಕ್ ಗಣಿ ಸೇರಿ ಒಟ್ಟು ಐದು ಜನರು ಮೂರು ರಾಯಲ್ ಎನ್‌ಫೀಲ್ಡ್ ನಲ್ಲಿ ಜೂನ್ 7ರಂದು ಉತ್ತರ ಭಾರತದ ಕಡೆ ಪ್ರಯಾಣ ಬೆಳಸಿದ್ದರು. ಆದರೆ, ಇದೇ ಸಮಯಕ್ಕೆ ಉತ್ತರ ಭಾರತದಲ್ಲಿ ಭಾರೀ ಮಳೆಗೆ ಪ್ರವಾಹ ಸೃಷ್ಠಿಯಾಗಿತ್ತು. 

ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀಯರಿಗೆ ಅರ್ಧ ಚಾರ್ಜ್‌ ಮಾಡಿ: ಸಂಸದ ಸಂಗಣ್ಣ

ಹಿಮಾಚಲ ಪ್ರದೇಶದ ಕುಲು ಸಮೀಪ ಕಸೋಲ್ ಎಂಬಲ್ಲಿ ರಾತ್ರಿ ತಂಗಿದ್ದ ಐವರು ಬೆಳಿಗ್ಗೆ ಬೇಗನೆ ಎದ್ದು ಮಳೆಯಲ್ಲಿ ಮುಂದಿನ ಪ್ರಯಾಣ ನಡಿಸಿದ್ದರು. ಆದರೆ, ಬಳಿಕ ಬಂದ ಸುದ್ದಿ ನೋಡಿ ತಂಡದ ಸದಸ್ಯರ ಎದೆ ಝಲ್ ಎನ್ನುವಂತಾಗಿತ್ತು. ಕಸೋಲ್ ಎಂಬಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಅಲ್ಲದೇ, ಶ್ರೀನಗರ ಸಮೀಪವೂ ಸೇತುವೆಯೊಂದನ್ನು ದಾಟಿದ ಕೆಲವು ಹೊತ್ತಿನ ಬಳಿಕ ಸೇತುವೆ ಪ್ರವಾಹದಿಂದ ಉಕ್ಕಿ ಹರಿಯತೊಡಗಿತ್ತು. ಆದರೆ, ನಮ್ಮ ಕುಟುಂಬಸ್ಥರ ಪ್ರಾರ್ಥನೆಯಿಂದಲೋ ಏನೋ ಅದೃಷ್ಠವಶಾತ್ ಯಾವುದೇ ತೊಂದರೆ ಇಲ್ಲದೇ ವಾಪಸ್ಸಾಗಿದ್ದೇವೆ ಅನ್ನುತ್ತಾರೆ  ಪ್ರವಾಸಿ ತಂಡದವರು. 

ಪ್ರತೀ ದಿನ 600 ಕಿ.ಮೀ. ದೂರ ಕ್ರಮಿಸುವ ಗುರಿಯೊಂದಿಗೆ ಹೊರಟ್ಟಿದ್ದ ತಂಡ, ಜೈಪುರ ಬಳಿ ಹೆದ್ದಾರಿ ಪಕ್ಕವೇ ಟೆಂಟ್ ಹಾಕಿ ರಾತ್ರಿ ಕಳೆದಿತ್ತು. ಆದರೆ, ಬೆಳಗ್ಗೆ 4 ಗಂಟೆಗೆ ಭಾರೀ ಮಳೆಯಿಂದಾಗಿ ಟೆಂಟ್ ಹಾರಿ ಹೋಗಿತ್ತು. ಪುಣೆ, ಇಂದೋರ್ ಅಜ್ಮೇರ್, ಜೈಪುರ, ಆಗ್ರಾ, ದೆಹಲಿ, ಪಠಾಣಕೋಟ್, ಅಮೃತಸರ, ಜಮ್ಮು, ಶ್ರೀನಗರ, ಕಾರ್ಗಿಲ್, ಲೇಹ್, ಲದಾಕ್, ಸರ್ಚು, ಮಲಾಲಿ, ಶಿಲ್ಮಾ ಚಂಡೀಘಢ ಹೀಗೆ ದೇಶದ ಪ್ರಮುಖ ಊರುಗಳನ್ನು ಸುತ್ತಿ ಸುರಕ್ಷಿತವಾಗಿ ಮರಳಿದ್ದೇವೆ. ಅಮೃತಸರದಲ್ಲಿ ವಾಘಾ ಬಾರ್ಡರ್, ಕಾರ್ಗಿಲ್‌ನ ಹುತಾತ್ಮರ ಸ್ಮಾರಕಗಳು ಮರೆಯಲಾರದ ಅನುಭವ. 

ಕಳಪೆ ಬಿತ್ತನೆ ಬೀಜ ಮಾರಿದರೆ ಪರವಾನಗಿ ರದ್ದು: ಚಲುವರಾಯಸ್ವಾಮಿ

ದೇಶದ ಪ್ರತಿಯೊಬ್ಬರೂ ನೋಡಬೇಕಾದ ಸ್ಥಳಗಳವು ಎನ್ನುತ್ತದೆ ಈ ತಂಡ. ವಿಶ್ವದ ಅತೀ ಎತ್ತರದ ಪ್ರದೇಶ ಉಮ್‌ಲಿಂಗ್ ಲಾ ಸಮುದ್ರ ಮಟ್ಟದಿಂದ 19024 ಅಡಿ ಇರುವ ಈ ಪ್ರದೇಶದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ ಇರುತ್ತದೆ. ಅಲ್ಲಿಂದ ಅತೀ ಸಮೀಪದಲ್ಲಿ ಚೀನಾ ಗಡಿಯಿದೆ. ವರ್ಷದ ಎಲ್ಲಾ ಸಮಯದಲ್ಲಿ ಅಲ್ಲಿಗೆ ತೆರಳಲು ಅವಕಾಶ ಸಿಗುವುದಿಲ್ಲ. ನಮ್ಮ ಅದೃಷ್ಠಕ್ಕೆ ಅಲ್ಲಿಗೆ ತೆರಳಲು ಅವಕಾಶ ಸಿಕ್ಕಿತು. ನಡುವೆ ಕೊಂಚ ಆಮ್ಲಜನಕದ ಸಮಸ್ಯೆಯಾಯಿತು. ಆದರೆ, ಅದನ್ನೆಲ್ಲ ಮೀರಿ ನಾವು ಅಲ್ಲಿಗೆ ಹೋಗಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದೆವು ಎನ್ನುತ್ತಾರೆ ಬೈಕ್ ರೈಡರ್‌ಗಳು.

click me!