ತುಮಕೂರು: ನೆರೆ ಸಂತ್ರಸ್ತರಿಗಾಗಿ 25,000 ಚಪಾತಿ, ಇತರ ಸಾಮಾಗ್ರಿ

By Kannadaprabha NewsFirst Published Aug 14, 2019, 12:36 PM IST
Highlights

ನೆರೆ ಸಂತ್ರಸ್ತರಿಗಾಗಿ ತುಮಕೂರಿನ ಸನ್‌ ರೈಸ್‌ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಾರೆ. ಸಂತ್ರಸ್ತರಿಗಾಗಿ 25,000 ಚಪಾತಿಗಳನ್ನು ತಯಾರಿಸಲಾಗಿದ್ದು, ಹಾಗೆಯೇ ಬಟ್ಟೆ, ಚಾಪೆ, ಹೊದಿಕೆಯಂತಹ ಇತರ ಸಮಾನಗ್ರಿಗಳನ್ನೂ ಸಂಗ್ರಹಿಸಲಾಗಿದೆ.

ತುಮಕೂರು(ಆ.14): ನಗರದ ಕ್ಯಾತ್ಸಂದ್ರದಲ್ಲಿರುವ ಸನ್‌ ರೈಸ್‌ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ನೆರೆ ಪರಿಹಾರ ವಸ್ತುಗಳನ್ನು ಸಂಗ್ರಹಿಸಿದರು.

ಚಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನೆರೆ ಸಂತ್ರಸ್ತರಿಗೆ 25 ಸಾವಿರ ಚಪಾತಿ, ಬಿಸ್ಕೆಟ್‌, ವಾಟರ್‌ ಬಾಟಲ್‌, ಚಾಪೆ, ಹೊದಿಕೆ, ಮಹಿಳೆ ಪುರುಷ, ಹಾಗೂ ಮಕ್ಕಳಿಗೆ ಉಡುಪುಗಳು 5 ಪ್ಯಾಕೆಟ್‌ ಅಕ್ಕಿ, ಔಷಧಿ ಸೇರಿದಂತೆ ಸಾಮಗ್ರಿಗಳನ್ನು ಹೊತ್ತು ಹೊರಡುವ ವಾಹನಕ್ಕೆ ಎಸ್‌ಐಟಿ ಆವರಣದಿಂದ ಶಾಸಕ ಜ್ಯೋತಿಗಣೇಶ್‌ ಚಾಲನೆ ನೀಡಿದರು.

ಪಾಲಿಕೆ ಸದಸ್ಯ ಬಿ.ಜಿ ಕೃಷ್ಣಪ್ಪ, ಸಂಘದ ಅಧ್ಯಕ್ಷ ಸಿ.ಟಿ ವಿಜಯ್‌, ಉಪಾಧ್ಯಕ್ಷ ಚಂದ್ರಮೋಹನ್‌ ರೆಡ್ಡಿ ಸೇರಿದಂತೆ ಮತ್ತಿತರು ಇದ್ದಾರೆ.

click me!