ಪಿಕ್‌ನಿಕ್‌ ಹೋದವರು ಜಲಪಾತಕ್ಕೆ ಬಿದ್ದು ದಾರುಣ ಸಾವು

Kannadaprabha News   | Asianet News
Published : Apr 18, 2021, 04:30 PM IST
ಪಿಕ್‌ನಿಕ್‌ ಹೋದವರು ಜಲಪಾತಕ್ಕೆ ಬಿದ್ದು ದಾರುಣ ಸಾವು

ಸಾರಾಂಶ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.  ನೀರಿನಲ್ಲಿ ಬಿದ್ದ ಯುವತಿಯನ್ನು ರಕ್ಷಿಸಲು ಹೋದವನೂ ಕೂಡ ಮುಳುಗಿ ಮೃತಪಟ್ಟಿದ್ದಾನೆ.

ಕೊಡಗು (ಏ.18): ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತದಲ್ಲಿ ಬಿದ್ದು ಇಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.  

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. 

ಯುಗಾದಿ ಹಬ್ಬದಂದು ಕರಾವಳಿಯಲ್ಲಿ ದೋಣಿ ದುರಂತ! ...

ಜಲಪಾತಕ್ಕೆ ಪಿಕ್‌ನಿಕ್ ಗೆಂದು 6 ಮಂದಿ ತೆರಳಿದ್ದು, ಈ ವೇಳೆ ನೀರಿನಲ್ಲಿ ಬಿದ್ದು  ದಿವ್ಯಾ (20) ಹಾಗೂ ಶಶಿಕುಮಾರ್ (32), ಮೃತಪಟ್ಟಿದ್ದಾರೆ. 

ದಿವ್ಯಾ ಆಯತಪ್ಪಿ‌ ನೀರಿಗೆ ಬಿದ್ದಿದ್ದು,  ದಿವ್ಯಾಳನ್ನು ರಕ್ಷಣೆ ಮಾಡಲು  ಶಶಿಕುಮಾರ್ ಹೋಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.  

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!