'ಸಿದ್ದರಾಮಯ್ಯಗೆ ಆತ್ಮವೂ ಇಲ್ಲ. ಆತ್ಮಸಾಕ್ಷಿಯೂ ಇಲ್ಲ'

By Web DeskFirst Published Oct 20, 2019, 1:20 PM IST
Highlights

ವೀರಸಾವರ್ಕರ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಗುಲಗಂಜಿಯಷ್ಟೂ ಗೊತ್ತಿಲ್ಲ| ಅವರಿಗೆ ಸ್ವತಂತ್ರ ಹೋರಾಟದ ಗಾಳಿ ಗಂಧ ಗೊತ್ತಿಲ್ಲ| ಇನ್ನೊಮ್ಮೆ ಸ್ವಾತಂತ್ರ ಹೋರಾಟದ ಬಗ್ಗೆ ಓದಲಿ ಎಂದ ಬಿಜೆಪಿ ರವಿಕುಮಾರ್| ಸ್ವಾತಂತ್ರ್ಯದ ಲಾಭ ಪಡೆದಿದ್ದು ಸಿದ್ದರಾಮಯ್ಯ| ಈ ವಿಚಾರದಲ್ಲಿ ಅವರು ನೀಚ ರಾಜಕಾರಣ ಮಾಡುತ್ತಿದ್ದಾರೆ| ಅವರಿಗೆ ಆತ್ಮವೂ ಇಲ್ಲ. ಆತ್ಮಸಾಕ್ಷಿಯೂ ಇಲ್ಲ| ಈ ಕೂಡಲೇ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆದು ಕೂಡಲೇ ಕ್ಷಮೆ ಕೇಳಬೇಕು| 

ಕಲಬುರಗಿ(ಅ.20): ವೀರಸಾವರ್ಕರ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಗುಲಗಂಜಿಯಷ್ಟೂ ಗೊತ್ತಿಲ್ಲ. ಅವರಿಗೆ ಸ್ವತಂತ್ರ ಹೋರಾಟದ ಗಾಳಿ ಗಂಧ ಗೊತ್ತಿಲ್ಲ. ಇನ್ನೊಮ್ಮೆ ಸ್ವಾತಂತ್ರ ಹೋರಾಟದ ಬಗ್ಗೆ ಓದಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.  

ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಲಾಭ ಪಡೆದಿದ್ದು ಸಿದ್ದರಾಮಯ್ಯ. ಈ ವಿಚಾರದಲ್ಲಿ ಅವರು ನೀಚ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಆತ್ಮವೂ ಇಲ್ಲ. ಆತ್ಮಸಾಕ್ಷಿಯೂ ಇಲ್ಲ. ಈ ಕೂಡಲೇ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆದು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಸಿಎಂ ಯಡಿಯೂರಪ್ಪ ಅವರನ್ನ ಪಕ್ಷದಲ್ಲಿ ಸೈಡ್ಲೈನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರರು, ಯಡಿಯೂರಪ್ಪ ಅವರನ್ನ ಪಕ್ಷದಲ್ಲಿ ಸೈಡ್ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಅವರಿಂದಲೇ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಎನ್ನುವುದು ನಿಸ್ಸಂದೇಹ. ಈ ಸರ್ಕಾರದ ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ತಿಳಿಸಿದ್ದಾರೆ.
 

click me!