2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!

Published : May 23, 2020, 08:31 PM IST
2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!

ಸಾರಾಂಶ

ಚೆಫ್, ಫಿಲ್ಮ್‌ಮೇಕರ್ ವಿಕಾಸ ಖನ್ನ ಸದ್ಯ ನ್ಯೂಯಾರ್ಕ್‌ನಲ್ಲಿದ್ದರೂ ಭಾರತೀಯರ ಸಂಕಷ್ಟಕ್ಕೆ ಸದಾ ನೆರವಾಗುತ್ತಲೇ ಇದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಊಟ, ಆಹಾರ ಪೊಟ್ಟಣ ಹಂಚುತ್ತಿರುವ ವಿಕಾಸ್ ಖನ್ನು ಇದೀಗ ಈದ್ ಹಬ್ಬ ಆಚರಿಸುತ್ತಿರುವ 2 ಲಕ್ಷ ಮಂದಿಗೆ ಆಹಾರ ವಿತರಿಸುತ್ತಿದ್ದಾರೆ.

ಮುಂಬೈ(ಮೇ.23): ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಮಾಸ್ಟರ್ ಚೆಫ್, ಸನಿಮಾ ನಿರ್ಮಾಣಕಾರ ವಿಕಾಸ್ ಖನ್ನ ಪ್ರತಿ ಭಾರಿ ಭಾರತೀಯರ ಸಂಕಷ್ಟಕ್ಕೆ ನೆರವಾಗುತ್ತಲೇ ಇದ್ದಾರೆ. ಇದೀಗ ಈದ್ ಉಲ್ ಫಿತರ್ ಆಚರಿಸಲು ಹಣ ಹಾಗೂ ಆಹಾರ ದವಸ ಧಾನ್ಯವಿಲ್ಲದೆ ಕಂಗಾಲಾಗಿರುವ ಮುಸ್ಲಿಂ ಬಾಂದವರಿಗೆ ರೇಶನ್ ವಿತರಣೆ ಮಾಡುತ್ತಿದ್ದಾರೆ. ಬರೋಬ್ಬರಿ 2 ಲಕ್ಷ ಮಂದಿಗೆ ರೇಶನ್ ವಿತರಿಸಲು ಮುಂದಾಗಿದ್ದಾರೆ.

 

'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ.

ವಿಕಾಸ್ ಖನ್ನ ತಂಡದ ಸದಸ್ಯರು 1 ಲಕ್ಷ ಕೆಜಿ ಡ್ರೈ ಫ್ರೂಟ್ಸ್, ಅಕ್ಕಿ, ಬೇಳೆ, ಸಕ್ಕರೆ, ಧಾನ್ಯ, ಮೆಣಸು ಸೇರಿದಂತೆ ಎಲ್ಲಾ ದಿನಸಿ ವಸ್ತುಗಳನ್ನು ವಿತರಿಸಿದ್ದಾರೆ. ಹಲವು ಸಂಖ ಸಂಸ್ಥೆಗಳ ಜೊತೆ ಕೈಜೋಡಿಸಿರುವ ವಿಕಾಸ್ ಖನ್ನ ಈದ್ ಹಬ್ಬ ಆಚರಿಸುತ್ತಿರುವ ಬಾಂದವರಿಗೆ ನೆರವಾಗಿದ್ದಾರೆ.

 

ಈದ್ ಆಚರಣೆಗೆ ಬೇಕಾದ ದಿನಸಿ ವಸ್ತುಗಳನ್ನು ಪೂರೈಸಿದ್ದಾರೆ.  ಇದು ಅತೀ ದೊದ್ದ ಈದ್ ಫೆಸ್ಟ್ ಎಂದೇ ಕರೆಯಲಾಗುತ್ತಿದೆ. ಲಾಕ್‌ಡೌನ್ ಆರಂಭವಾದ ದಿನದಿಂತ ವಿಕಾಸ್ ಖನ್ನ ತಂಡದ ಸದಸ್ಯರು ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ನಿರಂತರವಾಗಿ ಆಹಾರ ಒದಗಿಸುತ್ತಿರುವ ವಿಕಾಸ್, ಇದಕ್ಕಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. 

 

 ವಿಕಾಸ್ ಖನ್ನ ಸೇವೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ನಗರಗಳಲ್ಲಿ ವಿಕಾಸ್ ಖನ್ನ ತಂಡದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಬಡವರ ಹಸಿವು ನೀಗಿಸಲು ಅವಿರತ ಶ್ರಮ ಪಡುತ್ತಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana