ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜಡ್ಜ್‌ಗಳೂ ಸುರಕ್ಷಿತ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Published : Apr 06, 2026, 07:12 AM IST
pm Narendra modi slams tmc for malda kaliachak incident judicial officers hostage

ಸಾರಾಂಶ

ಪಶ್ಚಿಮ ಬಂಗಾಳದ ಮಾಲ್ಡಾ ಘಟನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ, ಟಿಎಂಸಿ ಆಡಳಿತವನ್ನು 'ಮಹಾ ಜಂಗಲ್‌ರಾಜ್' ಎಂದು ಟೀಕಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ನೇರ ಹೋರಾಟಕ್ಕೆ ಸವಾಲು ಹಾಕಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಗಂಟೆಗಟ್ಟಲೆ ಘೇರಾವ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಡಳಿತಾರೂಢ ಟಿಎಂಸಿಗೆ ಭಾನುವಾರ ಚಾಟಿ ಬೀಸಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿ ಆಳ್ವಿಕೆಯಲ್ಲಿ ರಾಜ್ಯ ಮಹಾ ಜಂಗಲ್‌ರಾಜ್‌ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಚ್‌ ಬೆಹಾರ್‌ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿ ನಡೆಸಿ ಮಾತನಾಡಿದ ಅವರು, ‘ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಹೇಗೆ ಒತ್ತೆಯಾಳುಗಳಾಗಿ ಇರಿಸಲಾಯಿತು ಎಂಬುದನ್ನು ಇಡೀ ದೇಶವೇ ನೋಡಿದೆ. ಇಂತಹ ಸರ್ಕಾರ ಬಂಗಾಳದ ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಂಗ ಅಧಿಕಾರಿಗಳೇ ಸುರಕ್ಷಿತವಾಗಿಲ್ಲದಿದ್ದರೆ, ಟಿಎಂಸಿ ಆಳ್ವಿಕೆಯಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿರುತ್ತಾರೆ ಎಂದು ಹೇಗೆ ತಾನೇ ನಂಬಬಹುದು? ಮಾಲ್ಡಾದಲ್ಲಿ ನಡೆದದ್ದು ಟಿಎಂಸಿಯ ಮಹಾ ಜಂಗಲ್‌ರಾಜ್‌ಗೆ ಒಂದು ಉದಾಹರಣೆ’ ಎಂದು ಹರಿಹಾಯ್ದರು.

ಬಿಜೆಪಿ ಗೆದ್ರೆ ಶಬರಿಮಲೆ ಚಿನ್ನ ಕಳ್ಳರು 2 ತಿಂಗಳಲ್ಲಿ ಜೈಲಿಗೆ: ಅಮಿತ್‌

ಕೊಚ್ಚಿ: , ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚಿಸಿದರೆ ಶಬರಿಮಲೆ ಚಿನ್ನ ಕಳವಿನ ಅಪರಾಧಿಗಳನ್ನು ಎರಡು ತಿಂಗಳೊಳಗೆ ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದರು.

ಎರ್ನಾಕುಲಂನ ಕುನ್ನತುನಾಡು ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಾ ಮಾತನಾಡಿ ಈ ಮಾತು ಹೇಳಿದರು. ಇದೇ ವೇಳೆ, ಈಸ್ಟರ್ ಹಬ್ಬದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯವನ್ನು ಸಂಪರ್ಕಿಸಿ ಕೇರಳದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡುವಂತೆ ವಿನಂತಿಸಿದರು.

ಚುನಾವಣಾ ರಾಜ್ಯಗಳಲ್ಲಿ ₹650 ಕೋಟಿ ನಗದು, ವಸ್ತು ವಶ

ಚುನಾವಣೆಗೆ ಸಜ್ಜಾಗಿರುವ 4 ರಾಜ್ಯಗಳು ಮತ್ತು ಪುದುಚೇರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 650 ಕೋಟಿ ರು. ಮೌಲ್ಯದ ನಗದು, ಮಾದಕವಸ್ತು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಅಂಕಿಅಂಶಗಳ ಪ್ರಕಾರ 319 ಕೋಟಿ ರು. ಮೌಲ್ಯದ ಈ ವಸ್ತುಗಳು ಪಶ್ಚಿಮ ಬಂಗಾಳವೊಂದರಲ್ಲೇ ವಶವಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ 170 ಕೋಟಿ ರು., ಅಸ್ಸಾಂನಲ್ಲಿ 97 ಕೋಟಿ ರು., ಕೇರಳದಲ್ಲಿ 58 ಕೋಟಿ ರು., ಪುದುಚೇರಿಯಲ್ಲಿ 7 ಕೋಟಿ ರು. ಮೌಲ್ಯದ ನಗದು/ವಸ್ತುಗಳು ಸಿಕ್ಕಿವೆ.

ತಯಾರಿ ಹೇಗಿದೆ?

ಚುನಾವಣೆ ಸಯಮಯದಲ್ಲಿ ಅಕ್ರಮವಾಗಿ ಇಂತಹ ಸಾಗಾಟಗಳು ಸಾಮಾನ್ಯವಾದ ಕಾರಣ ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 100 ನಿಮಿಷಗಳ ಒಳಗಾಗಿ ಸ್ಥಳವನ್ನು ತಲುಪುವ ಸಲುವಾಗಿ 5,173 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು, ಫೋಟೋಗ್ರಾಫರ್‌ಗಳು ಇರುತ್ತಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದಲ್ಲಿ ಜಿಹಾದ್‌ ನಡೆಸುತ್ತಿದ್ದ ಐಸಿಸ್‌ ನಂಟಿನ ಉಗ್ರಜಾಲ ಬಯಲು; ವಿದೇಶದಲ್ಲಿನ ಹ್ಯಾಂಡ್ಲರ್‌ಗಳ ಜತೆ ಸಂಪರ್ಕ
ಗುಜರಾತಿನ ಜನರು ಅನಕ್ಷರಸ್ಥರು, ಕೇರಳಂ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ