
ವಯನಾಡು (ಆ.5): ಭೂಕುಸಿತ ಸಂತ್ರಸ್ತರ ರಕ್ಷಣಾ ಕಾರ್ಯ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ಚೂರಲ್ಮಲೆಯ ಮನ್ಸೂರ್ (42) ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
‘ನನ್ನ ಬಳಿ ಈಗ ಏನೂ ಇಲ್ಲ. ಪರಿವಾರ, ಮನೆ ಎಲ್ಲವೂ ನಾಶವಾಯಿತು’ ಎಂದು ತನ್ನ ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರಿ ಹಾಗೂ ಆಕೆಯ ಕುಟುಂಬದ 11 ಮಂದಿ ಸೇರಿ 16 ಜನರನ್ನು ಕಳೆದುಕೊಂಡ ಮನ್ಸೂರ್ ಕಣ್ಣೀರಿಟ್ಟಿದ್ದಾರೆ. ಇದುವರೆಗೆ ಅವರ ಪತ್ನಿ, ಪುತ್ರ, ತಾಯಿ ಮತ್ತು ಸಹೋದರಿಯ ದೇಹವಷ್ಟೇ ದೊರಕಿದೆ. ಉಳಿದ ಹನ್ನೆರಡು ಜನರ ದೇಹಗಳು ಪತ್ತೆಯಾಗಿಲ್ಲ. ಘಟನೆ ನಡೆದಾಗ ಕೆಲಸದ ನಿಮಿತ್ತ ಹೊರಗೆಲ್ಲೋ ಹೋಗಿದ್ದ ಮನ್ಸೂರ್ ಬದುಕುಳಿದಿದ್ದು, ತಮ್ಮ ಸಹೋದರ ನಾಸಿರ್ನೊಂದಿಗೆ ವಾಸವಿದ್ದಾರೆ.‘ನೀರಿನ ಮಟ್ಟ ಏರಿದಾಗ ಎಲ್ಲರನ್ನೂ ಇಲ್ಲಿಗೇ ಬರಲು ಹೇಳಿದ್ದೆ. ಆದರೆ ಎಲ್ಲವೂ ಸರಿಯಾಗಿದೆ ಎಂದು ನಂಬಿ ಅಲ್ಲೇ ಉಳಿದ ಎಲ್ಲರೂ ಈಗ ಇಲ್ಲವಾಗಿದ್ದಾರೆ’ ಎಂದು ನಾಸಿರ್ ತನ್ನ ಸಹೋದರನ ದುಃಖಕ್ಕೆ ಕಂಬನಿ ಮಿಡಿದಿದ್ದಾರೆ.
ಅಪ್ಪನ ಕೈಹಿಡಿದೇ ಬೆಳೆದಿದ್ದೇ ಮಗಳು 'ಕೈ'ಯನನ್ನಷ್ಟೇ ಬಿಟ್ಟು ಹೋದಳು! ವಯನಾಡಿನಲ್ಲಿ ಮನಕಲುಕುವ ಘಟನೆ
ಚಿರು ಕುಟುಂಬ 1 ಕೋಟಿ, ಅಲ್ಲು ಅರ್ಜುನ್ 25 ಲಕ್ಷ ರು. ನೆರವು ಪ್ರಕಟ
ಮುಂಬೈ: ಕೇರಳದ ವಯನಾಡು ಭೂಕುಸಿತದಲ್ಲಿ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರಾದವರ ಕಷ್ಟಕ್ಕೆ ಸಿನಿಮಾ ತಾರೆಯರು ನೆರವಾಗಿದ್ದಾರೆ. ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿದ್ದು, ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ನೀಡಿದ್ದಾರೆ. ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ 1 ಕೋಟಿ ರು ಹಣವನ್ನು ನೀಡಿದ್ದರೆ, ಅಲ್ಲು ಅರ್ಜುನ್ 25 ಲಕ್ಷ ರು ಹಣವನ್ನು ಸಿಎಂಡಿಆರ್ಎಫ್ ನಿಧಿಗೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ