ಪಿಎಂ ಮೋದಿ ಮಹತ್ವದ ಘೋಷಣೆ: ಡಿಸೆಂಬರ್ 26 ಇನ್ಮುಂದೆ Veer Baal Diwas ಆಗಿ ಆಚರಣೆ!

By Suvarna NewsFirst Published Jan 9, 2022, 12:38 PM IST
Highlights

* ಗುರು ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಘೋಷಣೆ

* ಪ್ರತಿ ಡಿಸೆಂಬರ್ 26 ರಂದು ವೀರ ಬಾಲ ದಿನವಾಗಿ ಆಚರಣೆ

* ಹಿಂದೂ ಧರ್ಮವನ್ನು ರಕ್ಷಿಸಲು ಗುರು ಗೋವಿಂದ್ ಸಿಂಗ್ ಅವರು ತಮ್ಮ ನಾಲ್ಕು ಮಕ್ಕಳನ್ನು ದೇಶಕ್ಕಾಗಿ ಅರ್ಪಿಸಿದರು

ನವದೆಹಲಿ(ನ.09): ಗುರು ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಘೋಷಣೆ ಮಾಡಿದ್ದಾರೆ. ಈ ವರ್ಷದಿಂದ ಪ್ರತಿ ಡಿಸೆಂಬರ್ 26 ರಂದು ವೀರ ಬಾಲ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮೋದಿ ತಮ್ಮ ಟ್ವೀಟ್‌ನಲ್ಲಿ ಇಂದು, ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರ ಪ್ರಕಾಶ್ ಪರ್ವದ ಶುಭ ಸಂದರ್ಭದಲ್ಲಿ, ಈ ವರ್ಷದಿಂದ ಡಿಸೆಂಬರ್ 26ನ್ನು 'ವೀರ ಬಾಲ ದಿನ' ಎಂದು ಆಚರಿಸಲಾಗುವುದು ಎಂದು ತಿಳಿಸಲು ನಾನು ಹೆಮ್ಮೆಪಡುತ್ತೇನೆ. ಇದು ಸಾಹಿಬ್ಜಾದಾಸರ ಧೈರ್ಯಕ್ಕೆ ಸಂದ ಗೌರವ ಎಂದು ಬರೆದಿದ್ದಾರೆ.

ಇತಿಹಾಸವೇನು?

Today, on the auspicious occasion of the Parkash Purab of Sri Guru Gobind Singh Ji, I am honoured to share that starting this year, 26th December shall be marked as ‘Veer Baal Diwas.’ This is a fitting tribute to the courage of the Sahibzades and their quest for justice.

— Narendra Modi (@narendramodi)

ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಫತೇಹ್ ಸಿಂಗ್ ಜಿ ಅವರು ಗೋಡೆಯೊಂದರಲ್ಲಿ ಜೀವಂತವಾಗಿ ಇಟ್ಟ ದಿನವೇ 'ವೀರ ಬಾಲ ದಿನ' ನಡೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಇಬ್ಬರೂ ಮಹಾಪುರುಷರು ಧರ್ಮದ ಉದಾತ್ತ ತತ್ವಗಳಿಂದ ವಿಮುಖರಾಗುವುದಕ್ಕಿಂತ ಹೆಚ್ಚಾಗಿ ಸಾವಿಗೆ ಆದ್ಯತೆ ನೀಡಿದ್ದಾರೆ. ಮಾತಾ ಗುಜ್ರಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು 4 ಸಾಹಿಬ್ಜಾದಾಗಳ ಶೌರ್ಯ ಮತ್ತು ಆದರ್ಶಗಳು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಅನ್ಯಾಯದ ಮುಂದೆ ಎಂದೂ ತಲೆಬಾಗಲಿಲ್ಲ. ಅವರು ಅಂತರ್ಗತ ಮತ್ತು ಸಾಮರಸ್ಯದ ಜಗತ್ತನ್ನು ಕಲ್ಪಿಸಿಕೊಂಡರು. ಅವರ ಬಗ್ಗೆ ಹೆಚ್ಚು ಹೆಚ್ಚು ಜನರು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಇತಿಹಾಸ ಏನು?

ಹಿಂದೂ ಧರ್ಮವನ್ನು ರಕ್ಷಿಸಲು ಗುರು ಗೋವಿಂದ್ ಸಿಂಗ್ ಅವರು ತಮ್ಮ ನಾಲ್ಕು ಮಕ್ಕಳನ್ನು ದೇಶಕ್ಕಾಗಿ ಅರ್ಪಿಸಿದರು. ಗುರು ಗೋಬಿಂದ್ ಸಿಂಗ್ ಅವರ ಸಾಹಿಬ್ಜಾದೆ ಅಜಿತ್ ಸಿಂಗ್ ಅವರ ತ್ಯಾಗದ ಸಮಯದಲ್ಲಿ 18 ವರ್ಷ ಮತ್ತು ಜುಜಾರ್ ಸಿಂಗ್ 15 ವರ್ಷ ವಯಸ್ಸಿನವರಾಗಿದ್ದರು. ಡಿಸೆಂಬರ್ 26 ರಂದು, ಮೊಘಲರೊಂದಿಗೆ ಹೋರಾಡುತ್ತಿರುವಾಗ ಚಾಮಕೌರ್‌ನಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವಾಗ ಸಾಹಿಬ್ಜಾಡೆ ಹುತಾತ್ಮರಾಗಿದ್ದರು. 

ಬೆಳಕಿನ ಹಬ್ಬದ ಶುಭಾಶಯಗಳು

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಪ್ರಕಾಶ್ ಪರ್ವಕ್ಕೆ ಅಭಿನಂದಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ ಪ್ರಕಾಶ್ ಪರ್ವ್‌ನ ಶುಭಾಶಯಗಳು. ಅವರ ಜೀವನ ಮತ್ತು ಸಂದೇಶ ಲಕ್ಷಾಂತರ ಜನರನ್ನು ಸಬಲಗೊಳಿಸುತ್ತದೆ. ಅವರ 350 ನೇ ಪ್ರಕಾಶ್ ಉತ್ಸವವನ್ನು ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದೆ ಎಂಬ ಅಂಶವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಆ ಸಮಯದ ನನ್ನ ಪಾಟ್ನಾ ಭೇಟಿಯ ಕೆಲವು ಝಲಕ್‌ಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಗುರು ಗೋಬಿಂದ್ ಸಿಂಗ್ ಅವರ 350 ನೇ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಮೋದಿ ಪಾಟ್ನಾದಲ್ಲಿದ್ದರು ಎಂಬುವುದು ಉಲ್ಲೇಖನೀಯ. 

click me!