ಮೋದಿ ಉದ್ಘಾಟಿಸಿದ ಸೀ ಪ್ಲೇನ್‌ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್‌!

Published : Nov 02, 2020, 12:19 PM ISTUpdated : Nov 02, 2020, 12:56 PM IST
ಮೋದಿ ಉದ್ಘಾಟಿಸಿದ ಸೀ ಪ್ಲೇನ್‌ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್‌!

ಸಾರಾಂಶ

 ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಕೆವಾಡಿಯದಲ್ಲಿ ಉದ್ಘಾಟಿಸಿದ್ದ ದೇಶದ ಮೊದಲ ಸೀ ಪ್ಲೇನ್‌| ಮೋದಿ ಉದ್ಘಾಟಿಸಿದ ಸೀ ಪ್ಲೇನ್‌ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್‌

ಸೂರತ್(ನ.02)‌: ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಕೆವಾಡಿಯದಲ್ಲಿ ಉದ್ಘಾಟಿಸಿದ್ದ ದೇಶದ ಮೊದಲ ಸೀ ಪ್ಲೇನ್‌ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಒಂದೇ ದಿನ ಬರೋಬ್ಬರಿ 3000 ಬುಕ್ಕಿಂಗ್‌ ಲಭಿಸಿದೆ ಎಂದು ಸ್ಪೈಸ್‌ ಜೆಟ್‌ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಪೈಸ್‌ ಜೆಟ್‌ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್‌ ಸಿಂಗ್‌, ಈ ಯೋಜನೆಗೆ ಪ್ರಧಾನಿ ಹೆಚ್ಚಿನ ಬೆಂಬಲ ನೀಡಿದ್ದಾರೆ. ಉದ್ಘಾಟನೆ ನಡೆಸಿದ್ದು ಮಾತ್ರವಲ್ಲ ನಮ್ಮ ಮೊದಲ ಗ್ರಾಹಕ ಕೂಡ ಅವರೇ. ಬೇರೆ ನಗರಗಳಿಂದ ಕೂಡ ಏಕತಾ ಪ್ರತಿಮಗೆ ಸಂಪರ್ಕ ಕಲ್ಪಿಸುವ ಇರಾದೆ ಇದೆ. ಟಿಕೆಟ್‌ ದರ .1500-5000 ಇದ್ದು, ಶೇ.30ರಷ್ಟುಸೀಟುಗಳು ಉಡಾನ್‌ ಯೋಜನೆಯಡಿ .1500ಕ್ಕೆ ಲಭ್ಯವಿರಲಿದೆ. ಉಳಿದ ಸೀಟುಗಳಿಗೆ ಮಾರುಕಟ್ಟೆದರ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಮೊದಲ ಸೀಪ್ಲೇನ್‌:

ಕೇರಳ ಸರ್ಕಾರ 2013ರಲ್ಲಿ ದೇಶದ ಮೊದಲ ಸೀಪ್ಲೇನ್‌ ಪ್ರಾಯೋಗಿಕ ಹಾರಾಟ ನಡೆಸಿತ್ತಾದರೂ, ಮೀನುಗಾರರು ಹಾಗೂ ಸ್ಥಳೀಯರ ವಿರೋಧದಿಂದಾಗಿ ಅದು ವಾಣಿಜ್ಯಿಕ ಹಾರಾಟ ಪ್ರಾರಂಭಿಸಿರಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಿರುವ ದೇಶದ ಮೊದಲ ಸೀಪ್ಲೇನ್‌ ಇದಾಗಿದೆ.

ದರ ಎಷ್ಟು?:

ಗುಜರಾತ್‌ನ ಕೆವಾಡಿಯಾ ಹಾಗೂ ಅಹಮದಾಬಾದ್‌ ನಡುವೆ ತಲಾ 2 ಬಾರಿ ಸಂಚರಿಸುವ ಈ ವಿಮಾನದ ಪ್ರತಿ ಟಿಕೆಟ್‌ ಬೆಲೆ ಉಡಾನ್‌ ಯೋಜನೆಯಡಿ 1500 ರು.ನಿಂದ ಆರಂಭವಾಗುತ್ತದೆ. ಸ್ಪೈಸ್‌ ಜೆಟ್‌ ಕಂಪನಿ ವಿಮಾನ ಹಾರಾಟ ಸೇವೆ ಒದಗಿಸುತ್ತಿದೆ.

5 ತಾಸಿನ ಪಯಣಕ್ಕೆ 40 ನಿಮಿಷ:

ಅಹಮದಾಬಾದ್‌ಗೆ ಭೇಟಿ ನೀಡಿದವರು ವಿಶ್ವದ ಅತಿದೊಡ್ಡ ಪ್ರತಿಮೆಯಾಗಿರುವ ಸರ್ದಾರ್‌ ಪಟೇಲರ ಪ್ರತಿಮೆ ವೀಕ್ಷಿಸಬೇಕು ಎಂದರೆ ರಸ್ತೆ ಮಾರ್ಗವಾಗಿ ಕೆವಾಡಿಯಾ ತಲುಪಲು 5 ತಾಸು ಸಮಯ ತೆಗೆದುಕೊಳ್ಳುತ್ತಿತ್ತು. ಇದೀಗ ಸೀ ಪ್ಲೇನ್‌ನಲ್ಲಿ 40 ನಿಮಿಷದಲ್ಲಿ ಕ್ರಮಿಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು