'ಅಜ್ಜಿಗೆ ರಕ್ಷಣೆ ನೀಡಿದ್ದರು, ಸಿಖ್ಖರ ಋುಣ ನನ್ನ ಮೇಲಿದೆ’

Published : Oct 07, 2020, 11:54 AM IST
'ಅಜ್ಜಿಗೆ ರಕ್ಷಣೆ ನೀಡಿದ್ದರು, ಸಿಖ್ಖರ ಋುಣ ನನ್ನ ಮೇಲಿದೆ’

ಸಾರಾಂಶ

ಸಿಖ್ಖರ ಋುಣ ನನ್ನ ಮೇಲಿದೆ| 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವ​ರಿಗೆ ರಕ್ಷಣೆ ನೀಡಿದ್ದೇ ಸಿಖ್ಖ​ರು| ಖೇತಿ ಬಚಾವೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತು

 

ಚಂಡೀ​ಗ​ಢ(ಅ.07): ‘ನಾನು ಸಿಖ್ಖರ ಋುಣ​ದ​ಲ್ಲಿ​ರುವೆ. ಏಕೆಂದರೆ 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವ​ರಿಗೆ ರಕ್ಷಣೆ ನೀಡಿದ್ದೇ ಸಿಖ್ಖ​ರು’ ಎಂದು ಕಾಂಗ್ರೆಸ್‌ ಮುಖ​ಂಡ ರಾಹುಲ್‌ ಗಾಂಧಿ ಹೇಳಿ​ದ್ದಾ​ರೆ.

ಕೇಂದ್ರ ಸರ್ಕಾ​ರದ ರೈತ ಕಾಯ್ದೆ​ಗಳ ವಿರುದ್ಧ ಕಾಂಗ್ರೆಸ್‌ ಕೈಗೊಂಡಿ​ರುವ ‘ಖೇತಿ ಬಚಾವೋ ಯಾತ್ರೆ​’ಯ ಕೊನೆಯ ದಿನ ಸುದ್ದಿ​ಗಾ​ರರ ಜತೆ ಮಾತ​ನಾ​ಡಿದ ಅವರು, ‘ಪಂಜಾ​ಬಿ​ಗಳು ನನ್ನ ಕೆಲಸ ನೋಡ​ಬೇಕು. ಮಾತು​ಗ​ಳ​ನ್ನಲ್ಲ. ನಾನು ಸಿಖ್ಖ​ರಿಂದ ಸಾಕಷ್ಟುಕಲಿ​ತಿ​ದ್ದೇನೆ. 1977ರಲ್ಲಿ ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಚುನಾ​ವ​ಣೆ​ಯಲ್ಲಿ ಸೋತಿ​ದ್ದರು. ಆದರೆ ಆಗ ಯಾರೂ ಕೂಡ ನಮ್ಮ ಮನೆ​ಯಲ್ಲಿ ಇರ​ಲಿಲ್ಲ. ಕೇವಲ ಸಿಖ್ಖರು ರಕ್ಷಣೆ ನೀಡಿ​ದರು. ಹೀಗಾಗಿ ನಾನು ಪಂಜಾಬಿ ಜನರ ಋುಣ​ದ​ಲ್ಲಿ​ದ್ದೇ​ನೆ’ ಎಂದ​ರು. ಆದರೆ 84ರಲ್ಲಿ ಇಂದಿರಾ ಗಾಂಧಿ ಅವರು ಸಿಖ್‌ ಅಂಗರಕ್ಷಕ​ರಿಂದಲೇ ಹತ​ರಾ​ದರು ಎಂಬುದು ಇಲ್ಲಿ ಗಮ​ನಾ​ರ್ಹ.

ತಾಯಿ ಆರೋಗ್ಯ ನೋಡಿ​ಕೊ​ಳ್ಳ​ಬೇ​ಕಿ​ತ್ತು:

ಇದೇ ವೇಳೆ, ಮಹ​ತ್ವದ ಕೃಷಿ ಕಾಯ್ದೆ​ಗಳು ಸಂಸ​ತ್ತಿ​ನಲ್ಲಿ ಚರ್ಚೆಗೆ ಬಂದ ಸಂದ​ರ್ಭ​ದಲ್ಲಿ ತಾವು ವಿದೇ​ಶಕ್ಕೆ ತೆರ​ಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್‌, ‘ನನ್ನ ತಾಯಿ (ಸೋ​ನಿಯಾ ಗಾಂಧಿ) ವೈದ್ಯ​ಕೀಯ ತಪಾ​ಸ​ಣೆ​ಗೆ ಹೋಗಿ​ದ್ದ​ರಿಂದ ನಾನೂ ಅವರ ಜತೆ ವಿದೇ​ಶಕ್ಕೆ ತೆರ​ಳ​ಬೇ​ಕಾ​ಯಿತು. ನಾನು ಅವರ ಮಗ. ಅವ​ರನ್ನು ನೋಡಿ​ಕೊ​ಳ್ಳು​ವುದು ನನ್ನ ಕರ್ತ​ವ್ಯ’ ಎಂದ ರಾಹುಲ್‌, ‘ಸೋನಿಯಾ ಜತೆ ಪ್ರಿಯಾಂಕಾ ತೆರ​ಳ​ಬ​ಹು​ದಿತ್ತು. ಆದರೆ ಅವರ ಮನೆಯ ಕೆಲವು ಸಿಬ್ಬಂದಿಗೆ ಕೊರೋನಾ ಬಂದ ಕಾರಣ ತಾಯಿ ಜತೆ ತೆರ​ಳ​ಲಿ​ಲ್ಲ’ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸೋನಂ ವಾಂಗ್‌ಚುಕ್ ಕಡೆಗಣಿಸಿದ ಅಭಿಜಿತ್ ದೀಪ್ಕೆ; ಮೊದಲ ಗೆಲುವಲ್ಲೇ ಕಾಕ್ರೋಚ್ ಬುದ್ಧಿ ಬಯಲಾಯ್ತು!
E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?