ಕೊರೋನಾ ಅಟ್ಟಹಾಸ, ಈ ತಿಂಗಳು ತೆರೆಯಲ್ಲ ಶಬರಿಮಲೆ ದೇಗುಲ ದ್ವಾರ!

Published : Jun 11, 2020, 03:50 PM IST
ಕೊರೋನಾ ಅಟ್ಟಹಾಸ, ಈ ತಿಂಗಳು ತೆರೆಯಲ್ಲ ಶಬರಿಮಲೆ ದೇಗುಲ ದ್ವಾರ!

ಸಾರಾಂಶ

ಈ ತಿಂಗಳು ತೆರೆಯಲ್ಲ ಶಬರಿಮಲೆ ದೇಗುಲ ದ್ವಾರ| ವಾರ್ಷಿಕ ಜಾತ್ರೆಯೂ ರದ್ದು| ಟ್ರಸ್ಟ್ ಅಧಿಕಾರಿ ಹಾಗೂ ಸಚಿಇವರ ಸಭೆಯಲ್ಲಿ ನಿರ್ಧಾರ

ಶಬರಿಮಲೆ(ಜೂ.11): ಕೊರೋನಾ ಅಟ್ಟಹಾಸ ಎಲ್ಲರ ನಿದ್ದೆಗೆಡಿಸಿದೆ. ಸದ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಸಂಬಂಧ ಕೇರಳ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ತಿಂಗಳು ಅಯ್ಯಪ್ಪನ ದೇಗುಲ ತೆರೆಯುವುದಿಲ್ಲ ಎಂದು ದೇವಸ್ವಂ ಸಚಿವ ಕದಾಕಂಪಲ್ಲಿ ಸುರೇಂದ್ರನ್ ಈ ಮಾಹಿತಿ ನೀಡಿದ್ದಾರೆ. ಅಲ್ಲದೇ ಜೂನ್ 19 ರಂದು ಆರಮಭವಾಗಬೇಕಿದ್ದ ಶಬರಿಮಲೆ ದೇಗುಲದ ಜಾತ್ರೆಯನ್ನೂ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ದೇಗುಲ ಆಡಳಿತ ಮಂಡಳಿ ಜೊತೆ ನಡೆದ ಮಾತುಕತೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ನಿರ್ಧಾರ

ಎರಡು ದಿನಗಳ ಹಿಂದಷ್ಟೇ ದೇಗುಲದ ಅರ್ಚಕ ಆಡಳಿತ ಮಂಡಳಿಗೆ ಪತ್ರವೊಂದನ್ನು ಬರೆದು, ಮಂದಿರ ತೆರೆಯದಂತೆ ಮನವಿ ಮಾಡಿದ್ದರು. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ಮನವಿ ಮಾಡಲಾಗಿತ್ತು. ಹೀಗಿದ್ದರೂ ದೇಗುಲ ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಅಲ್ಲದೇ ಜೂನ್ ಹದಿನಾಲ್ಕರಿಂದ ದರ್ಶನ ಆರಮಭವಾಗುತ್ತದೆ ಎಂದೂ ಹೇಳಲಾಗಿತ್ತು. ಆದರೀಗ ಆಡಳಿತ ಮಂಡಳಿ ಹಾಗೂ ಸರ್ಕಾರದ ಮಟ್ಟದ ಸಭೆ ನಡೆದಿದ್ದು, ಈ ತಿಂಗಳು ದೇಗುಲ ಸ್ವಾರ ತೆರೆಯದಂತೆ ನಿರ್ಧರಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!