ಕಾಂಗ್ರೆಸ್ ಅಧ್ಯಕ್ಷನನ್ನು ರಾಖಿ ಸಾವಂತ್ ಎಂದ ಶಾಸಕ..!

By Suvarna NewsFirst Published Sep 18, 2021, 1:08 PM IST
Highlights
  • ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ‘ಪಂಜಾಬ್‌ ರಾಜಕೀಯದ ರಾಖೀ ಸಾವಂತ್‌’ ಎಂದ ಶಾಸಕ
  • ಹೇಳಿಕೆಗೆ ಕಾಂಗ್ರೆಸ್‌ನ ನಾಯಕರು ವಿರೋಧ

ಚಂಡೀಗಢ(ಸೆ.18): ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ‘ಪಂಜಾಬ್‌ ರಾಜಕೀಯದ ರಾಖೀ ಸಾವಂತ್‌’ ಎಂದು ಆಮ್‌ ಆದ್ಮಿ ಪಕ್ಷದ ಶಾಸಕ ರಾಘವ್‌ ಚಡ್ಡಾ ವಿವಾದಿತ ಹೇಳಿಕೆ ನೀಡಿದ್ದಾರೆ.

ದಿಲ್ಲಿ ಸಿಎಂ ಕೇಜ್ರಿವಾಲ್‌ ಎಪಿಎಂಸಿ ಮಂಡಿ ಹಿಂಪಡೆದಿದ್ದನ್ನು ವಿರೋಧಿಸಿ ಸಿಧು ಮಾಡಿರುವ ವಿಡಿಯೋ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಶಾಸಕ ಚಡ್ಡಾ, ‘ಸಿಧು ಪಂಜಾಬ್‌ ರಾಜಕಾರಣದ ರಾಖಿ ಸಾವಂತ್‌ ಇದ್ದಂತೆ. ಸಿಎಂ ಅಮರೀಂದರ್‌ ಸಿಂಗ್‌ ವಿರುದ್ಧ ನಿರಂತರ ವಾಗ್ವಾದ ನಡೆಸಿ ಹೈಕಮಾಂಡ್‌ನಿಂದ ಬೈಸಿಕೊಂಡಿದ್ದರು.

ಒಂದೆರಡಲ್ಲ, ಬರೋಬ್ಬರಿ 78 ಬಾರಿ ವಿಚಾರಣೆ ಮುಂದೂಡಿಕೆ: ಸುಪ್ರೀಂ ಗರಂ

ಇದೀಗ ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದಿದ್ದಾರೆ. ಮತ್ತೆ ನಾಳೆಯಿಂದ ಅಮರೀಂದರ್‌ ವಿರುದ್ಧ ಜಗಳ ಶುರುಮಾಡುತ್ತಾರೆ’ ಚಡ್ಡಾ ಹೇಳಿಕೆಗೆ ಕಾಂಗ್ರೆಸ್‌ನ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ತೀಕ್ಷ್ಣ ಪ್ರತಿಕ್ರಿಯೆಯ ನಂತರ, ಸಿಧು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಂಗನಿಂದ ಮಾನವ ಎಂದು ಅವರು ಹೇಳುತ್ತಾರೆ, ನಿಮ್ಮ ಮನಸ್ಸನ್ನು ನೋಡಿದಾಗ ನೀವು ಇನ್ನೂ ಇಳಿಯುತ್ತಿದ್ದೀರಿ ಎಂದು ನಾನು ನಂಬುತ್ತೇನೆ! ನಿಮ್ಮ ಸರ್ಕಾರದಿಂದ ಕೃಷಿ ಕಾನೂನುಗಳನ್ನು ಸೂಚಿಸುವ ಬಗ್ಗೆ ನನ್ನ ಪ್ರಶ್ನೆಗೆ ನೀವು ಇನ್ನೂ ಉತ್ತರಿಸಿಲ್ಲ ಎಂದಿದ್ದಾರೆ.

ಹಿಂದಿನ ದಿನ, ಎಸ್‌ಎಡಿ ಅದರ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ಮಾಜಿ ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ನೇತೃತ್ವದಲ್ಲಿ ಕಾನೂನುಗಳ ಅಂಗೀಕಾರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯಲ್ಲಿ ಕಾನೂನುಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು.

click me!