Crime Against Women| ಹೆಂಡತಿ ಇಷ್ಟವಾಗಲಿಲ್ಲ ಎಂದು ಬೇರೊಬ್ಬನಿಗೆ ಮಾರಿದ ಗಂಡ, ಅಪ್ರಾಪ್ತೆಯ ಗ್ಯಾಂಗ್‌ರೇಪ್!

Published : Nov 22, 2021, 10:41 PM ISTUpdated : Nov 22, 2021, 11:20 PM IST
Crime Against Women| ಹೆಂಡತಿ ಇಷ್ಟವಾಗಲಿಲ್ಲ ಎಂದು ಬೇರೊಬ್ಬನಿಗೆ ಮಾರಿದ ಗಂಡ, ಅಪ್ರಾಪ್ತೆಯ ಗ್ಯಾಂಗ್‌ರೇಪ್!

ಸಾರಾಂಶ

* ರಾಜಸ್ಥಾನದಲ್ಲಿ ಶಾಕಿಂಗ್ ಘಟನೆ * ಹೆಂಡತಿ ಇಷ್ಟವಾಗಲಿಲ್ಲ ಎಂದು ಯುವಕನಿಗೆ ಮಾರಿದ ಗಂಡ * ಅಪ್ರಾಪ್ತೆಯ ಮೇಲೆ ಸಾಮೂಹುಕ ಅತ್ಯಾಚಾರ

ಜೈಪುರ(ನ.22): ರಾಜಸ್ಥಾನದ (Rajasthan) ಬುಂದಿ ಜಿಲ್ಲೆಯಲ್ಲಿ ಅಪ್ರಾಪ್ತ ಪತ್ನಿಯನ್ನು ಮತ್ತೊಬ್ಬ ಯುವಕನಿಗೆ ಮಾರಾಟ ಮಾಡಿ ಸಾಮೂಹಿಕ ಅತ್ಯಾಚಾರ (Gangrape) ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಹಿಂದೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಗಢದಲ್ಲಿ ನಡೆದಿದೆ. ಇಲ್ಲಿ ಯುವಕನೊಬ್ಬ ತನ್ನ ಪತ್ನಿಯನ್ನು ಇಷ್ಟಪಡದ ಕಾರಣ ಆಕೆಯನ್ನು ಮತ್ತೊಬ್ಬ ಯುವಕನಿಗೆ ಒಪ್ಪಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರವನ್ನೂ (Rape)  ನಡೆಸಿದ್ದಾನೆ. ಈ ವಿಷಯ ಬೆಳಕಿಗೆ ಬಂದ ತಕ್ಷಣ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತೆಯ ಪತಿ, ನಾದಿನಿ ಸೇರಿದಂತೆ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಅಪಹರಣ ಪ್ರಕರಣ ದಾಖಲಿಸಿದ್ದರು

ಪೊಲೀಸರ ಪ್ರಕಾರ ನವೆಂಬರ್ 3 ರಂದು ಸಂತ್ರಸ್ತೆಯ ತಂದೆ ಮಗಳ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ವಿಜಯಗಢದ ನಿವಾಸಿ ರಾಕೇಶ್ ಮೀನಾ ಎಂಬಾತನನ್ನು ಅವರ ಪುತ್ರಿ ವಿವಾಹವಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ತಂದೆಯೂ ಮಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನವೆಂಬರ್ 10 ರಂದು ಪೊಲೀಸರು ಯುವತಿಯ ಹೇಳಿಕೆಯನ್ನು ತೆಗೆದುಕೊಂಡಾಗ, ಆಕೆ ತನ್ನ ಪತಿ ಸಾಮೂಹಿಕ ಅತ್ಯಾಚಾರ ನಡೆಸಿ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿದ್ದಳು. ಭಾನುವಾರ ಮಧ್ಯಾಹ್ನ ಆರೋಪಿ ಪ್ರಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಜೈಲಿಗೆ ಕಳುಹಿಸಲಾಯಿತು. ಮಹಿಳೆಯ ದೂರಿನಂತೆ ಅಲ್ಲೇ ಆಕೆಯ ಪತಿ ರಾಕೇಶ್ ಮೀನಾ ಮತ್ತು ಓಂಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಆರೋಪಿ ಮಹೇಂದ್ರನಿಗಾಗಿ ಶೋಧ ನಡೆಯುತ್ತಿದೆ.

ನಾದಿನಿ ಮಾರಿದರು

ಸೆಪ್ಟೆಂಬರ್ 30 ರಂದು ರಾತ್ರಿ ಒಂದು ಗಂಟೆ ಸುಮಾರಿಗೆ ಪತಿ ರಾಕೇಶ್ ಮೀನಾ ತನ್ನನ್ನು ಮನೆ ಸಮೀಪದ ದರ್ಜೆಗೆ ಕರೆದಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲಿಗೆ ತಲುಪಿದಾಗ, ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಹಾಗೂ ನಾದಿನಿ ಪ್ರಿಯಾ, ಆಕೆಯ ಗಂಡ ಮಹೇಂದ್ರ ಮೀನಾ ಜೊತೆಗೆ ಅವಳನ್ನು ಡಿಯೋಲಿಗೆ ಕರೆದೊಯ್ದನು. ಡಿಯೋಲಿಯಲ್ಲಿ ಪ್ರಿಯಾ ಬಾಡಿಗೆಗೆ ಮನೆ ತೆಗೆದುಕೊಂಡಿದ್ದರು. ಇಲ್ಲಿ ಯುವತಿಯನ್ನು ಇಬ್ಬರೂ ಸೇರಿ ಗ್ರಾಮದ ನಿವಾಸಿ ಓಂಪ್ರಕಾಶ್ ಎಂಬಾತನಿಗೆ ಒಪ್ಪಿಸಿದ್ದಾರೆ. ಓಂಪ್ರಕಾಶ್ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. 

ಮೂರು ದಿನಗಳ ನಂತರ, ಗ್ರಾಮದ ಗುಡಿಸಲಿಗೆ ಕರೆದೊಯ್ದು ಅತ್ಯಾಚಾರವನ್ನು ಮುಂದುವರೆಸಲಾಗಿದೆ. ಈ ವೇಳೆ ಅವಕಾಶವನ್ನು ಬಳಸಿಕೊಂಡ ಸಂತ್ರಸ್ತೆ ತನ್ನ ಸಹೋದರನಿಗೆ ಫೋನ್ ಮೂಲಕ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪೊಲೀಸರು ನಂದೋಯ್ ಮಹೇಂದ್ರ ಮೀನಾ, ನಂದ ಪ್ರಿಯಾ, ಓಂ ಪ್ರಕಾಶ್ ಮತ್ತು ಪತಿ ರಾಕೇಶ್ ಮೀನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಸೇರಿದಂತೆ ಇತರ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆಯ ಪತಿ, ನಾದಿನಿ ಹಾಗೂ ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ