
ನವದೆಹಲಿ(ಫೆ.08): ಕೇಂದ್ರದ ಮೂರು ಕೃಷಿ ಕಾನೂನು ವಿರುದ್ಧ ಭಾನುವಾರ ಹರ್ಯಾಣದ ಭಿವಾನಿ ಜಿಲ್ಲೆಯ ಕಿತ್ಲಾನಾದಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ಕೃಷಿ ಮಸೂದೆ ಹಿಂಪಡೆಯದಿದ್ದರೆ, ಧಾನ್ಯಗಳನ್ನು ಖಜಾನೆಯಲ್ಲಿ ಬಚ್ಚಿಡಬೇಕಾದ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.
ಸಂಯುಕ್ತ ರೈತ ಮೋರ್ಚಾ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ರೈತರ ಬಳಿ ಒಗ್ಗಟ್ಟಿನಿಂದಿರಲು ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮತ್ತಷ್ಟು ಎಚ್ಚರದಿಂದಿರುವಂತೆ ಸೂಚಿಸಿರುವ ಟಿಕಾಯತ್ ಬಿಜೆಪಿಯ ಕೆಲ ನಾಯಕರು ಈಗಾಗಲೇ ಪ್ರತಿಭಟನಾನಿರತ ರೈತರನ್ನು ಸಿಖ್ಖರು ಹಾಗೂ ಸಿಖ್ ಅಲ್ಲದವರು ಎಂದು ಬೇರ್ಪಡಿಸುವ ಯತ್ನ ಆರಂಭಿಸಿದ್ದಾರೆ ಎಂದಿದ್ದಾರೆ.
ಕೇಂದ್ರದ ಕಪ್ಪು ಕಾನೂನಿಂದ ರೈತನ ನಾಶ
ಇವರು ತಮ್ಮ ಉದ್ದೇಶದಲ್ಲಿ ಸಫಲರಾಗಿಲ್ಲ, ಬದಲಾಗಿ ಇದರಿಂದಾಗಿ ಹರ್ಯಾಣ ಹಾಗೂ ಪಂಜಾಬ್ನ ರೈತರ ನಡುವಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ. ಕೆಂದ್ರದ ಮೂರು ಕಪ್ಪು ಕಾನೂನಿನಿಂದ ರೈತರು ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ