
ಚಂಡೀಗಢ(ಫೆ.06): ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು ಎಂಬ ಬಗ್ಗೆ ಗೋಷಣೆಯಾಗಲಿದೆ. ಲುಧಿಯಾನದ ದಖಾದಲ್ಲಿ ಆಯೋಜಿಸಲಾಗಿರುವ ವರ್ಚುವಲ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಲಿದ್ದಾರೆ. ಇದಕ್ಕೂ ಮುನ್ನ ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ವಾಸ್ತವ ಸಭೆಯನ್ನುದ್ದೇಶಿಸಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸ್ವತಃ ಸಿಧು ರಾಹುಲ್ ಗಾಂಧಿ ದಲಿತರನ್ನು ಪಂಜಾಬ್ ಸಿಎಂ ಮಾಡಿದ್ದಾರೆ. ಇದು ಅವರ ದೃಷ್ಟಿಕೋನ. ಆದರೆ, ಚನ್ನಿಯೇ ಸಿಎಂ ಅಭ್ಯರ್ಥಿ ಎಂದು ಇನ್ನೂ ಘೋಷಣೆಯಾಗಿಲ್ಲ ಎಂದಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾತನಾಡಿದ ಸಿಧು ರಾಹುಲ್ ಗಾಂಧಿ ದಲಿತರನ್ನು ಸಿಎಂ ಮಾಡಿದರು. ಹೊಸ ಅಡಿಪಾಯ ನಿರ್ಮಿಸುವ ಅಗತ್ಯವಿದೆ ಎಂದರು. ನವಜೋತ್ ಸಿಂಗ್ ಸಿಧುವನ್ನು ಮೊದಲ ಕಲ್ಲಾಗಿ ಇಡಬೇಕಿದೆ. ಆದರೆ ಇದನ್ನು ನಾನಾಗಿ ಕೇಳಲಾರೆ, ಆದರೆ ನಿಮ್ಮವರನ್ನಾಗಿರಿಸಿ. ಸುಖ ದುಃಖಗಳ ಒಡನಾಡಿಯಾಗಿರಿಸಿ. ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದಿದ್ದಾರೆ.
ರಾಹುಲ್ ಗಾಂಧಿಯನ್ನು ಬಬ್ಬರ್ ಶೇರ್ ಎಂದ ಸಿಧು
ನಾನು ಸೂರ್ಯ, ಕತ್ತಲೆ ಸೀಳಿ ಉದಯಿಸುತ್ತೇನೆ. ಇಂದು ಮುಖ್ಯಮಂತ್ರಿಗಳ ಹೆಸರನ್ನು ಘೋಷಿಸುವ ಸಮಯ ಬಂದಿದೆ. ಮೊಲವು ರಸ್ತೆಯ ಮೇಲೆ ಸತ್ತು ಬಿದ್ದಿತ್ತು, ಏಕೆಂದರೆ ಅದಕ್ಕೆ ಯಾವ ಕಡೆಗೆ ಹೋಗಬೇಕೆಂದು ನಿರ್ಧರಿಸಲು ಸಾಧ್ಯವಾಗಲಿಲ್ಲ. ಆದರೆ ಇಲ್ಲಿ ಸಿಂಹವಿದೆ ಎಂದಿದ್ದಾರೆ. ಇಲ್ಲಿ ಸಿಧು ರಾಹುಲ್ ಗಾಂಧಿಯನ್ನುದ್ದೇಶಿಸಿ ಮಾತನಾಡುತ್ತಿದ್ದರೂ ಖುದ್ದು ತಮ್ಮನ್ನು ತಾವು ಹೊಗಳಿಕೊಂಡಿರುವುದು ಸ್ಪಷ್ಟವಾಗಿದೆ.
ರಾಹುಲ್ ನನ್ನನ್ನು 4 ವರ್ಷಗಳಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು
ಪಕ್ಷಕ್ಕೆ ಸೇರಿದ 4 ವರ್ಷದಲ್ಲಿ ರಾಹುಲ್ ಗಾಂಧಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಿದರು. ಕುರಿ ಮತ್ತು ಮೇಕೆಗಳ ಕಡೆಗೆ ಹೋಗಬೇಡಿ, ನೀವು ಸಿಂಹಗಳನ್ನು ತರಬೇಕು ಎಂದಿದ್ದಾರೆ. ಈ ಮೂಲಕ ಸಿಧು ತನ್ನನ್ನು ತಾನು ಹೊಗಳಿಕೊಂಡಿದ್ದಾರೆ.
ನಗುವುದಕ್ಕೂ ಹಣ ಪಡೆಯುತ್ತೇನೆ
ನನಗೇನೂ ಬೇಡ ಎಂದ ಸಿಧು ನನಗೆ ಪಂಜಾಬಿನ ಕಲ್ಯಾಣ ಬೇಕು. ಪಂಜಾಬ್ನ ಯೋಗಕ್ಷೇಮವನ್ನು ಹುಡುಕುತ್ತಿದ್ದೇನೆ. ನಾನು ಪಂಜಾಬ್ನಲ್ಲೇ ಸಾಯೋದು ಇಲ್ಲೇ ಬದುಕುವುದು. ನಗುವುದಕ್ಕೂ ಹಣ ಪಡೆಯುತ್ತೇನೆ ಎಂದ ಸಿಧು ನನ್ನ ಹೋರಾಟ ಪ್ರೀತಿಪಾತ್ರರ ಜೊತೆ ಅಲ್ಲ, ಆದರೆ ಅಪರಿಚಿತರೊಂದಿಗೆ ಎಂದಿದ್ದಾರೆ.
ಪಂಜಾಬಿನಲ್ಲಿ ನಶೆ ನಿರ್ಮೂಲನೆಯಾಗಬೇಕು ಇಲ್ಲವೇ ಸಿಧು ಕೊನೆಯಾಗಬೇಕು
ಈ ಸಭೆಯಲ್ಲಿ ಬಿಕ್ರಮ್ ಮಜಿಥಿಯಾ ಅವರಿಗಾಗಿ ಸಿಧು ಸೌಮ್ಯ ಪದಗಳನ್ನು ಬಳಸಿರುವುದು ಕಂಡುಬಂದಿದೆ. ಮಜಿಥಿಯಾ ಅವರು ಈ ಬಾರಿ ಅಮೃತಸರ ಪೂರ್ವದಿಂದ ಸಿಧು ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಸಿದ್ದು ಹಳೇ ಆರೋಪಗಳನ್ನೇ ಮತ್ತೆ ಪುನರುಚ್ಛರಿಸಿದ್ದಾರೆ. ಪಂಜಾಬ್ನಲ್ಲಿ ಒಂದೋ ಡ್ರಗ್ ಮಾಫಿಯಾ ಅಥವಾ ನವಜೋತ್ ಸಿಂಗ್ ಸಿಧು ಇವೆರಡರಲ್ಲಿ ಯಾವುದಾದರೂ ಒಂದು ನಿರ್ಮೂಲನೆಯಾಗುತ್ತದೆ ಎಂದಿದ್ದಾರೆ. ವೇದಿಕೆ ಮೇಲೆ ಕುಳಿತ ಚನ್ನಿ ಸಿಂಪಲ್ ಶೀಟ್ ಹಾಕಿದ್ದರೆ, ಸಿದ್ದು ಬಣ್ಣ ಬಣ್ಣದ ಶಾಲು ಹಾಕಿಕೊಂಡಿದ್ದರು.
ಚನ್ನಿಯನ್ನು ಹೊಗಳಿದ ಸುನೀಲ್ ಜಾಖರ್
ಸುನೀಲ್ ಜಾಖರ್ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ. ದಲಿತರನ್ನು ಸಿಎಂ ಮಾಡಿದ್ದಾರೆ, ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಮುಂದಿನ ಪೀಳಿಗೆಗೆ ಇದು ನೆನಪಿನಲ್ಲಿ ಉಳಿಯುತ್ತದೆ, ಆದರೆ ಇದೇ ವೇಳೆ ಆಲೋಚನೆ ಒಳ್ಳೆಯದಾಗಿರಬೇಕು. ತಮ್ಮ ಈ ಮಾತುಗಳ ಮೂಲಕ ಜಾಖರ್ ಸಿಧುಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ