
ನವದೆಹಲಿ(ಮೇ 29): ಭಾರತದ ರೈತರು ಹಾಗೂ ಜನರ ಜೀವನಾಡಿ ಎಂದು ಎನ್ನಿಸಿಕೊಂಡಿರುವ ಮುಂಗಾರು ಕೇರಳಕ್ಕೆ ಜೂನ್ 1ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.
ಈ ಮುನ್ನ ಮೇ 15ರಂದು ಬಿಡುಗಡೆ ಮಾಡಿದ್ದ ಮುನ್ಸೂಚನೆ ವೇಳೆ ಜೂನ್ 5ರ ಸುಮಾರಿಗೆ ಕೇರಳಕ್ಕೆ ಮುಂಗಾರು ಆಗಮನ ಆಗಬಹುದು. ವಾಡಿಕೆಗಿಂತ 4 ದಿನ ವಿಳಂಬ ಆಗಮನ ಆಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿತ್ತು.
ರಾಮಮಂದಿರಕ್ಕೆ ಪಾಕ್ ತಕರಾರು: ಭಾರತದ ಭರ್ಜರಿ ತಿರುಗೇಟು
‘ಆದರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಬಹುದಾದ ಚಂಡಮಾರುತವು ಮುಂಗಾರಿನ ವೇಗವನ್ನು ತೀವ್ರಗೊಳಿಸಲು ನೆರವಾಗುವ ಸಾಧ್ಯತೆ ಇದೆ. ಮೇ 31ರಿಂದ ಜೂನ್ 4ರ ಮಧ್ಯೆ, ಕೇಂದ್ರ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಬಹುದು. ಇದು ಜೂನ್ 1ಕ್ಕೇ ಮುಂಗಾರು ಅಗಮನಕ್ಕೆ ನೆರವಾಗಬಹುದು’ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವರ್ಷ ಅಂದುಕೊಂಡಂತೆ ಉತ್ತಮ ಮಳೆ ಬೀಳಬಹುದು ಎಂದು ಈಗಾಗಲೇ ಅದು ಅಂದಾಜಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ