ಗೌತಮ್ ಗಂಭೀರ್ ನಾಪತ್ತೆ!: ಗಲ್ಲಿ ಗಲ್ಲಿಯಲ್ಲೂ ಪೋಸ್ಟರ್‌ಗಳ ಭರಾಟೆ!

Published : Nov 17, 2019, 12:39 PM ISTUpdated : Nov 18, 2019, 04:54 PM IST
ಗೌತಮ್ ಗಂಭೀರ್ ನಾಪತ್ತೆ!: ಗಲ್ಲಿ ಗಲ್ಲಿಯಲ್ಲೂ ಪೋಸ್ಟರ್‌ಗಳ ಭರಾಟೆ!

ಸಾರಾಂಶ

ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ನಾಪತ್ತೆ| ಹುಡುಕಾಟಕ್ಕಾಗಿ ದೆಹಲಿಯ ಗಲ್ಲಿ ಗಲ್ಲಿಗಳಲ್ಲೂ ಪೋಸ್ಟರ್ಸ್| ಕೊನೆಯ ಬಾರಿ ಇಂದೋರ್ ಸ್ಟೇಡಿಯಂನಲ್ಲಿ ಜಲೇಬಿ ತಿನ್ನುತ್ತಿದ್ದ ಗೌತಮ್

"

ನವದೆಹಲಿ[ನ.17]: ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ, ಇಡೀ ದೆಹಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂಬ ಮಿಸ್ಸಿಂಗ್ ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯ ಮೂಲೆ ಮೂಲೆಯಲ್ಲೂ ಕಾಣಲಾರಂಭಿಸಿವೆ. 

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಹೌದು ದೆಹಲಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಸಂಸತ್ತಿನ ನಗರಾಭಿವೃದ್ದಿ ಸಮಿತಿ ಮಾಲಿನ್ಯ ನಿಯಂತ್ರಣದ ಕುರಿತು ಮಹತ್ವದ ಮೀಟಿಂಗ್  ಕರೆದಿತ್ತು. ಪೂರ್ವ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಗೌತಮ್ ಗಂಭೀರ್ ಕೂಡ ಈ ಸಭೆಗೆ ಹಾಜರಾಗಬೇಕಿತ್ತು. ಆದರೆ ಗಂಭೀರ್ ಮೀಟಿಂಗ್ ಹಾಜರಾಗದೇ, ಇಂದೋರ್‌ನಲ್ಲಿ ನಡೆಯುಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗೆ ತೆರಳಿದ್ದರು. ಇಲ್ಲಿ ಜಿಲೇಬಿ ತಿನ್ನುತ್ತಾ ಕಮೆಂಟ್ರಿ ನೀಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. 

ಈ ಪ್ರಸಂಗದ ಬೆನ್ನಲ್ಲೇ ಇದೀಗ ದೆಹಲಿಯ ಗಲ್ಲಿ ಗಲ್ಲಿಯಲ್ಲೂ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ಸ್ ಅಂಟಿಸಲಾಗಿದೆ. 'ನೀವೇನಾದರೂ ಇವರನ್ನು ನೋಡಿದ್ದೀರಾ? ಕೊನೆಯ ಬಾರಿ ಇಂದೋರ್‌ನಲ್ಲಿ ಜಿಲೇನಿ ತಿನ್ನುತ್ತಿರುವಾಗ ಕಂಡು ಬಂದಿದ್ದರು. ಇಡೀ ದೆಹಲಿ ಇವರನ್ನು ಹುಡುಕುತ್ತಿದೆ' ಎಂದು ಈ ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ದೆಹಲಿಯ ಜನನಿಬಿಡ ಪ್ರದೇಶಗಳು, ಮರಗಳು ಸೇರಿದಂತೆ ಗಲ್ಲಿ ಗಲ್ಲಿಗಳಲ್ಲೂ ಈ ಪೋಸ್ಟರ್ಸ್ ಕಂಡು ಬಂದಿವೆ. ಇನ್ನಾದರೂ ಗೌತಮ್ ಗಂಭೀರ್ ಪ್ರತ್ಯಕ್ಷರಾಗ್ತಾರಾ? ಕಾದು ನೋಡಬೇಕಷ್ಟೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿಟ್ ಆಂಡ್ ರನ್ ಕೇಸ್, ಓರ್ವ ನಿಧನ: ಸ್ಟಾರ್ ಡೈರೆಕ್ಟರ್ ಪುತ್ರ ಅರೆಸ್ಟ್
H-1B ಬಳಿಕ H-4 ವೀಸಾಕ್ಕೆ ಕೈಹಾಕಿದ ಟ್ರಂಪ್​! ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ಭಾರತೀಯರು