
ಔರಂಗಾಬಾದ್[ಡಿ.18]: ಕೆಲಸ ಅರಸಿ ಬೆಳಗಾವಿಗೆ ಬಂದಿದ್ದ ಮಹರಾಷ್ಟ್ರದ ಬೀಡ್ ಜಿಲ್ಲೆಯ ಕಾರ್ಮಿಕ ಮಹಿಳೆಯೊಬ್ಬಳು ಕಬ್ಬಿನ ಗದ್ದೆಯಲ್ಲೇ ತನ್ನ 17ನೇ ಮಗುವಿಗೆ ಜನ್ಮ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ 17ನೇ ಹೆಣ್ಣು ಮಗು ಮೃತ ಪಟ್ಟಿದೆ ಎಂದು ಔರಂಗಾಬಾದ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ಗೋಪಾಲ ಜನಾಂಗಕ್ಕೆ ಸೇರಿದ ಲಂಕಾಬಾಯಿ ಎಂಬ ಮಹಿಳೆ 20ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಆರೋಗ್ಯಾಧಿಕಾರಿಗಳು ಸೆ.8ರಂದು ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ನ.21ರಂದು ಆರೋಗ್ಯ ತಪಾಸಣೆಗೆಂದು ಬಂದಾಗ ಬೆಳಗಾವಿಗೆ ವಲಸೆ ಹೋಗಿರುವುದು ತಿಳಿದು ಬಂದಿದೆ.
ಮಹಿಳೆಗೆ ಒಟ್ಟು 11 ಮಕ್ಕಳಿದ್ದು, 5 ಮಕ್ಕಳು ಮೃತ ಪಟ್ಟಿದ್ದಾರೆ. 3 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೀಡ್ ಜಿಲ್ಲೆಯಲ್ಲಿ ಭಾರೀ ಅನಾವೃಷ್ಠಿಯಿಂದಾಗಿ ಸಾವಿರಾರು ಮಂದಿ ಕಬ್ಬಿನ ಗದ್ದೆಯಲ್ಲಿ ಕೆಲಸ ಅರಸಿ ಬೆಳಗಾವಿ ಸೇರಿ ಕರ್ನಾಟಕದ ನಾನಾ ಭಾಗಗಳಿಗೆ ವಲಸೆ ಬರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ