
ಕೊಚ್ಚಿ(ಆ.25): ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರನ್ನು ಕೊಂಡಾಡಿರುವ ಕೇರಳ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಆಫ್ಘನ್ನಲ್ಲಿ ಹೊಸ ಭರವಸೆ ಮೂಡಿದೆ ಎಂದಿದೆ.
ಪಿಎಫ್ಐ ನಾಯಕ ಪರಪ್ಪುರತು ಕೋಯಾ ಈ ಬಗ್ಗೆ ಮಾತನಾಡಿದ್ದು, ‘ಬಹುತೇಕ ಪಾಶ್ಚಿಮಾತ್ಯ ಮಾಧ್ಯಮಗಳು ತಾಲಿಬಾನ್ ಬಗ್ಗೆ ಸುಳ್ಳು ಹರಡುತ್ತಿವೆ. ತಾಲಿಬಾನನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬಾರದು. ಪಾಕಿಸ್ತಾನವನ್ನು ಅಫ್ಘನ್ನಿಂದ ದೂರವಿಡಲು ಭಾರತ ರಾಜತಾಂತ್ರಿಕ ಸಂಬಂಧ ಬೆಳೆಸಬೇಕು’ ಎಂದಿದ್ದಾರೆ.
‘ವಿಯೆಟ್ನಾಂ, ಬೊಲಿವಿಯಾದಲ್ಲಿ ಅಮೇರಿಕಾ ಸೇನೆಯನ್ನು ಹಿಮ್ಮೆಟ್ಟಿಸಿದ ಹಾಗೆಯೇ ತಾಲಿಬಾನ್ ಕೂಡ ಪ್ರತಿರೋಧ ತೋರಿದೆ. ಅಮೆರಿಕ ನೇಮಿಸಿದ್ದ ಅಶ್ರಫ್ ಘನಿ ವ್ಯಾಪಕ ಭ್ರಷ್ಟಾಚಾರದಲ್ಲಿ ನಡೆಸಿದ್ದರು. ಇದು ತಾಲಿಬಾನ್ಗೆ ನೆರವಾಯಿತು’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ