
ನವದೆಹಲಿ(ಏ.08): ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ರೈಲ್ವೆಯ ಅಂಗಸಂಸ್ಥೆ ‘ಐಆರ್ಸಿಟಿಸಿ’ ಓಡಿಸುತ್ತಿರುವ 3 ಪ್ರವಾಸಿ ರೈಲು ಸಂಚಾರ ರದ್ದತಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಕೊರೋನಾ ಲಾಕ್ಡೌನ್ ಮಾಸಾಂತ್ಯದವರೆಗೆ ಮುಂದುವರಿಯುತ್ತಾ ಎಂಬ ಅನುಮಾನ ಮೂಡಿದೆ.
ವಾರಾಣಸಿ-ಇಂದೋರ್ ‘ಕಾಶಿ ಮಹಾಕಾಲ ಎಕ್ಸ್ಪ್ರೆಸ್’, ಲಖನೌ-ದೆಹಲಿ ‘ತೇಜಸ್ ಎಕ್ಸ್ಪ್ರೆಸ್’ ಹಾಗೂ ಅಹಮದಾಬಾದ್ ಮುಂಬೈ ‘ತೇಜಸ್ ಎಕ್ಸ್ಪ್ರೆಸ್’ ರೈಲುಗಳೇ ರದ್ದಾದವು. ಈ ಹಿಂದೆಯೇ ಮಾಚ್ರ್ 25ರಿಂದ ಏಪ್ರಿಲ್ 14ರವರೆಗೆ ಈ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಏ.14ರ ನಂತರ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿತ್ತು.
ಹೀಗಾಗಿ ಏ.14ರಿಂದ 30ರವರೆಗೆ ಬುಕ್ಕಿಂಗ್ ಮಾಡಿದವರ ಹಣ ವಾಪಸು ಮರಳಿಸುವುದಾಗಿ ಐಆರ್ಸಿಟಿಸಿ ಹೇಳಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ