ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು 75 ಜನರ ಪ್ರಾಣ!

Published : Jul 20, 2020, 10:01 AM ISTUpdated : Jul 20, 2020, 10:46 AM IST
ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು 75 ಜನರ ಪ್ರಾಣ!

ಸಾರಾಂಶ

ತಿರುಪತೀಲಿ ತಪ್ಪಿತು 75 ಜನರಿದ್ದ ಇಂಡಿಗೂ ವಿಮಾನದ ಅಪಘಾತ| ಇಳಿವ ಕೆಲ ಕ್ಷಣ ಮುನ್ನ ರನ್‌ವೇಲಿ ಅಪಘಾತಕ್ಕೀಡಾದ ಫೈರ್‌ ಇಂಜಿನ್‌ ವಾಹನ ಪತ್ತೆ| ತಕ್ಷಣವೇ ಲ್ಯಾಂಡಿಂಗ್‌ ರದ್ದು ಮಾಡಿ ವಿಮಾನ ಬೆಂಗಳೂರಿಗೆ ತಂದು ಇಳಿಸಿದ ಪೈಲಟ್‌

ತಿರುಪತಿ(ಜು.20):  75 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ಸಂಸ್ಥೆಗೆ ಸೇರಿದ ವಿಮನವೊಂದು ಭಾರೀ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಭಾನುವಾರ ತಿರುಪತಿಯಲ್ಲಿ ನಡೆದಿದೆ. ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ತಿರುಪತಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತಂದು ತಿಳಿಸಲಾಗಿದೆ.

ಲಡಾಖ್‌ನಲ್ಲಿ ಭಾರತೀಯ ಸೇನೆ ಸಮರಭ್ಯಾಸ; ಯುದ್ಧ ವಿಮಾನದಿಂದ ಜಿಗಿದು ಸಾಹಸ ಪ್ರದರ್ಶನ!

ಏನಾಯ್ತು: ಹೈದ್ರಾಬಾದ್‌ -ತಿರುಪತಿ- ಬೆಂಗಳೂರು ನಡುವೆ ಸಂಚರಿಸುವ ಇಂಡಿಯೋ ವಿಮಾನ ಭಾನುವಾರ ಬೆಳಗ್ಗೆ 41 ಪ್ರಯಾಣಿಕರನ್ನು ಇಳಿಸಲು ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಆಗಮಿಸುತ್ತಿತ್ತು. ವಿಮಾನ ಇನ್ನೇನು ಇಳಿಯಬೇಕು ಅನ್ನುವ ಹಂತದಲ್ಲಿ ಪೈಲಟ್‌ಗೆ ರನ್‌ವೇನಲ್ಲಿ ಅಪಘಾತಕ್ಕೀಡಾದ ಅಗ್ನಿಶಾಮಕ ದಳದ ವಾಹನ ಪತ್ತೆಯಾಗಿದೆ. ಕೂಡಲೇ ಸಮಯಪ್ರಜ್ಞೆ ತೋರಿದ ಪೈಲಟ್‌, ವಿಮಾನವನ್ನು ಇಳಿಸುವ ಬದಲು ಸೀದಾ ಬೆಂಗಳೂರಿಗೆ ಕೊಂಡೊಯ್ದು, ಅಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ಹೀಗಾಗಿ ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಎಳೆ ಕೂಸಿಗೆ 1000 ಕಿ.ಮೀ ದೂರದಿಂದ ಎದೆಹಾಲು!

ಪ್ರಾಥಮಿಕ ವಿಚಾರಣೆ ವೇಳೆ, ಸಾಮಾನ್ಯ ತಪಾಸಣೆಗೆ ತೆರಳಿದ್ದ ವೇಳೆ ಅಗ್ನಿಶಾಮಕ ವಾಹನ ಅಪಘಾತಕ್ಕೀಡಾಗಿದ್ದು ಬೆಳಕಿಗೆ ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳ ಸಂಚಾರದಲ್ಲಿ ಸುಮಾರು 3 ಗಂಟೆಗಳ ವ್ಯತ್ಯಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು