Hijab Row: ಹೆಣ್ಮಕ್ಕಳ ಮೇಲೆ ಕಲ್ಲು ಎಸೆತ, ಕಾಲೇಜು ಬಂದ್, ತಕ್ಷಣ ವಿಚಾರಣೆ ನಡೆಸಿ: ಕಪಿಲ್ ಸಿಬಲ್ ವಾದ

Published : Feb 10, 2022, 11:25 AM ISTUpdated : Feb 10, 2022, 11:40 AM IST
Hijab Row: ಹೆಣ್ಮಕ್ಕಳ ಮೇಲೆ ಕಲ್ಲು ಎಸೆತ, ಕಾಲೇಜು ಬಂದ್, ತಕ್ಷಣ ವಿಚಾರಣೆ ನಡೆಸಿ: ಕಪಿಲ್ ಸಿಬಲ್ ವಾದ

ಸಾರಾಂಶ

* ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಹಿಜಾಬ್ ವಿವಾದ * ಕರ್ನಾಟಕದ ಹಿಜಾಬ್ ವಿವಾದ ಈಗ ಸುಪ್ರೀಂ ದ್ವಾರದಲ್ಲಿ * ಹೆಣ್ಮಕ್ಕಳ ಮೇಲೆ ಕಲ್ಲು ಎಸೆತ, ಕಾಲೇಜು ಬಂದ್, ತಕ್ಷಣ ವಿಚಾರಣೆ ನಡೆಸಿ: ಕಪಿಲ್ ಸಿಬಲ್ ವಾದ

ನವದೆಹಲಿ(ಫೆ.10): ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಪ್ರಸ್ತಾಪಿಸಲಾಗಿದೆ. ವಕೀಲ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಪ್ರಕರಣವನ್ನು ವಿಚಾರಣೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹಿಜಾಬ್ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ಕಪಿಲ್ ಸಿಬಲ್ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ, ಹುಡುಗಿಯರ ಮೇಲೆ ಕಲ್ಲು ತೂರಾಟವೂ ನಡೆದಿದೆ. ಇದು 9 ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿದ ಧಾರ್ಮಿಕ ವಿಷಯವಿದ್ದಂತೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ತ್ವರಿತವಾಗಿ ಆಲಿಸಬೇಕು. ಯಾವುದೇ ಆದೇಶವನ್ನು ಹೊರಡಿಸದಿದ್ದರೂ, ಆದರೆ ಮುಂಚಿತವಾಗಿ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿ. ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ. ಹೈಕೋರ್ಟ್ ಕೂಡ ವಿಚಾರಣೆ ನಡೆಸಲಿ ಎಂದಿದ್ದಾರೆ. ಈ ಹಿಂದೆ ಶಬರಿಮಲೆ ದೇಗುಲ ವಿವಾದವನ್ನು ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠ ಆಲಿಸಿತ್ತು ಎಂಬುವುದು ಉಲ್ಲೇಖನೀಯ. 

ಮೊದಲು ಹೈಕೋರ್ಟ್ ವಿಚಾರಣೆ ಮಾಡಲಿ: ಸುಪ್ರೀಂ ಕೋರ್ಟ್ 

ಈ ಕುರಿತು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.ಇಂದು ಕೂಡ ವಿಚಾರಣೆ ನಡೆಯಬೇಕಿದೆ.ಮೊದಲು ಹೈಕೋರ್ಟ್ ತೀರ್ಮಾನ ಮಾಡಲಿ.ಈ ವಿಚಾರದಲ್ಲಿ ಸದ್ಯಕ್ಕೆ ಆತುರವಿಲ್ಲ. ನಾವು ವಿಷಯವನ್ನು ಕೇಳಿದರೆ, ಹೈಕೋರ್ಟ್ ಕೇಳುವುದಿಲ್ಲ. ಪ್ರಸ್ತುತ, ಹಿಜಾಬ್ ಪ್ರಕರಣದಲ್ಲಿ ಯಾವುದೇ ದಿನಾಂಕವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಹೀಗಿರುವಾಗ ಹೈಕೋರ್ಟ್ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ವಿಷಯವನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್‌ನೊಂದಿಗೆ ಮಾತನಾಡುತ್ತಿದ್ದೇನೆ ಎಂದು ಸಿಬಲ್ ಹೇಳಿದರು. ಒಂದು ವೇಳೆ ಹೈಕೋರ್ಟ್ ಯಾವುದೇ ಆದೇಶ ನೀಡದೇ ಇದ್ದಲ್ಲಿ ಅದನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಬೇಕು. ಸುಪ್ರೀಂ ಕೋರ್ಟ್ ಈ ವಿಷಯವನ್ನು ವರ್ಗಾಯಿಸಬೇಕು ಮತ್ತು 25 ನೇ ವಿಧಿಯ ಅಡಿಯಲ್ಲಿ ಅದನ್ನು ಆಲಿಸಬೇಕು ಮತ್ತು ಅದರಲ್ಲಿ ರಾಜ್ಯದ ಪಾತ್ರವನ್ನು ನೋಡಬೇಕು ಎಂದು ಸಿಬಲ್ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!