
ಆಂಧ್ರಪ್ರದೇಶ (ಜು.23): ಪೂರ್ವ ಗೋಧಾವರಿ ಜಿಲ್ಲೆಯ ಕಾಡಲಿ ಗ್ರಾಮದ ಕುಟುಂಬವೊಂದರ ಮೂವರು ಮಹಿಳೆಯರು, ಕೋವಿಡ್ಗೆ ಹೆದರಿ ಕಳೆದ 15 ತಿಂಗಳಿನಿಂದ ಸ್ವಯಂಗೃಹಬಂಧನಕ್ಕೆ ಒಳಗಾಗಿದ್ದ ಘಟನೆ ಬೆಳಕಿಗೆ ಬಂದಿದೆ.
ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಮನೆಯ ದಾಖಲಾತಿಗೆ ಸಹಿ ಪಡೆಯಲು ಅಧಿಕಾರಿಯೊಬ್ಬರು ಮನೆಯ ಬಳಿ ಬಂದಾಗ ವಿಷಯ ಬೆಳಕಿಗೆ ಬಂದಿದೆ.
ಸೋಂಕು ಇಳಿದರೂ ಸಾವು ಇಳಿಯುತ್ತಿಲ್ಲ : ಮರಣ ದರ ಹೆಚ್ಚಳಕ್ಕೆ ಕಾರಣ ಏನು..?
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಮನೆಯ ಬಳಿ ಬಂದು ಅವರನ್ನು ರಕ್ಷಿಸಿದ್ದಾರೆ. 15 ತಿಂಗಳುಗಳ ಕಾಲ ಮನೆಯಿಂದ ಆಚೆ ಬರದೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹಳ ಕೃಶವಾಗಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರುಥಮ್ಮ(45), ಕಾಂತಾಮಣಿ(32) ಮತ್ತು ರಾಣಿ(30) ಎಂಬುವವರೇ ಹೆದರಿ ಮನೆಯಿಂದ ಹೊರಬಾರದೇ ಉಳಿದುಕೊಂಡ ಹೆಂಗಸರು.
ಮನೆಯ ಯಜಮಾನ ಚಟ್ಟುಲ ಬೆನ್ನಿ (50), ಅವರ ಮಗ ಚಿನ್ನಬಾಬು(28) ಮಾತ್ರ ಮನೆಯಾಚೆ ಬಂದು ಕೆಲಸ ಮಾಡುತ್ತಿದ್ದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ. ಕೋವಿಡ್ ರೋಗ ಬಂದರೆ ಸಾವು ಖಚಿತ ಎಂದು ನಂಬಿದ ಮನೆಯವರು ಹೊರಗೆ ಬರಲು ನಿರಾಕರಿಸಿ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ಅವರ ಮಗ ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ