ಶೇ.50ರಷ್ಟು ಅಪ​ಘಾತ ತಗ್ಗಿ​ಸುವ ಗುರಿ ಮುಟ್ಟಲು ವಿಫ​ಲ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Published : Jun 09, 2023, 01:30 AM IST
ಶೇ.50ರಷ್ಟು ಅಪ​ಘಾತ ತಗ್ಗಿ​ಸುವ ಗುರಿ ಮುಟ್ಟಲು ವಿಫ​ಲ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಸಾರಾಂಶ

2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲು​ಪು​ವುದು ಸಂದೇ​ಹಾ​ಸ್ಪ​ದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದ​ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ 

ನವದೆಹಲಿ(ಜೂ.09):  2024ರ ವೇಳೆಗೆ ಭಾರತದಲ್ಲಿ ರಸ್ತೆ ಅಪಘಾತವನ್ನು ಶೇ.50ರಷ್ಟುಕಡಿಮೆ ಮಾಡುವ ಗುರಿ ತಲು​ಪಲು ಸಾಧ್ಯ​ವಾ​ಗು​ವು​ದಿ​ಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ವಿಷಾ​ದಿ​ಸಿ​ದ್ದಾ​ರೆ.

ಗುರುವಾರ ಮಾತನಾಡಿದ ಅವರು,‘2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲು​ಪು​ವುದು ಸಂದೇ​ಹಾ​ಸ್ಪ​ದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದ​ರು.

ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!

‘ರಸ್ತೆ ನಿರ್ಮಾಣ ಮಾಡಲು ತಯಾರಿಸುವ ಡಿಪಿಆರ್‌ನಲ್ಲಿ ಕಂಪನಿಗಳು ಹಣ ಉಳಿಸುವ ಉದ್ದೇಶವನ್ನು ಹೊಂದಿವೆಯೆ ಹೊರತು ಭದ್ರತೆ ಹಾಗೂ ಸುರ​ಕ್ಷತೆ ದೃಷ್ಟಿಹೊಂದಿಲ್ಲ’ ಎಂದೂ ವಿಷಾದಿಸಿದರು. ಇದರಿಂದಾಗಿ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದೆ. ಇದರಲ್ಲಿ 2 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, 3 ಲಕ್ಷ ಮಂದಿ ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ ಎಂದು ಬೇಸ​ರಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!