ಪಳನಿಸ್ವಾಮಿಯನ್ನು ‘ಅಕ್ರಮ ಸಂತಾನ’ ಎಂದಿದ್ದ ರಾಜಾ ಕ್ಷಮೆ!

Published : Mar 30, 2021, 11:48 AM IST
ಪಳನಿಸ್ವಾಮಿಯನ್ನು ‘ಅಕ್ರಮ ಸಂತಾನ’ ಎಂದಿದ್ದ ರಾಜಾ ಕ್ಷಮೆ!

ಸಾರಾಂಶ

ಪಳನಿಸ್ವಾಮಿಯನ್ನು ‘ಅಕ್ರಮ ಸಂತಾನ’ ಎಂದಿದ್ದ ರಾಜಾ ಕ್ಷಮೆ| ರಾಜಾ ಹೇಳಿಕೆ ನೆನೆದು ಅತ್ತಿದ್ದ ಸಿಎಂ

ಚೆನ್ನೈ(ಮಾ.30): ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ‘ಅಕ್ರಮ ಸಂತಾನ’ ಎಂದು ಕರೆದು ವಿವಾದಕ್ಕೀಡಾಗಿದ್ದ ಡಿಎಂಕೆ ಮುಖಂಡ ಎ. ರಾಜಾ ಅವರು ಸೋಮವಾರ ಕ್ಷಮೆಯಾಚಿಸಿದ್ದಾರೆ.

ಶನಿವಾರ ಮಾತನಾಡಿದ್ದ ರಾಜಾ, ‘ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರು ಸಕ್ರಮ ಸಂತಾನ ಹಾಗೂ ಸಂಪೂರ್ಣ ಪ್ರಬುದ್ಧ ಮಗು ಇದ್ದ ಹಾಗೆ. ಆದರೆ ಎಡಪ್ಪಾಡಿ ಪಳನಿಸ್ವಾಮಿ ಅವರು ಅಕ್ರಮ ಸಂಬಂಧಕ್ಕೆ ಹುಟ್ಟಿದ ಅವಧಿಪೂರ್ವ ಸಂತಾನ ಇದ್ದ ಹಾಗೆ’ ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ಸಮಾವೇಶವೊಂದರಲ್ಲಿ ಭಾನುವಾರ ಮಾತನಾಡಿದ್ದ ಪಳನಿಸ್ವಾಮಿ, ತಮ್ಮ ಅಮ್ಮನ ಕುರಿತು ರಾಜಾ ಆಡಿದ ಮಾತು ದುಃಖ ತಂದಿದೆ. ಅವರಿಗೆ ಮತದಾರನೇ ಪಾಠ ಕಲಿಸಲಿದ್ದಾನೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದರು.

ಈ ಹಿನ್ನೆಲೆಯಲ್ಲಿ, ಜನಾಕ್ರೋಶ ತಮ್ಮ ಮೇಲೆ ತಿರುಗಿದೆ ಎಂದು ಅರಿತ ರಾಜಾ, ಸೋಮವಾರ ಕ್ಷಮೆಯಾಚಿಸಿದ್ದಾರೆ. ‘ನಾನು ರಾಜಕೀಯ ಅರ್ಥದಲ್ಲಿ ಹೇಳಿದ್ದೆನೇ ವಿನಾ ವೈಯಕ್ತಿಕವಾಗಿ ಹೇಳಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಕೂಡ, ‘ಈ ರೀತಿ ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ’ ಎಂದು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ