ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ!

Published : Sep 12, 2021, 08:25 AM IST
ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ!

ಸಾರಾಂಶ

* ಮಳೆಯಿಂದಾಗಿ ವಿಮಾನ ನಿಲ್ದಾಣ ಜಲಾವೃತ * ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ * ಈ ಋುತುವಿನಲ್ಲಿ 1,100 ಮಿ.ಮೀಟರ್‌ ಮಳೆ * 1975ರಲ್ಲಿ 1,150 ಮಿ.ಮೀಟರ್‌ ಮಳೆ ಆಗಿತ್ತು

ನವದೆಹಲಿ(ಸೆ.12): ರಾಷ್ಟ್ರ ರಾಜಧಾನಿ ದೆಹಲಿ ಶನಿ​ವಾರ ಹಿಂದೆಂದೂ ಕಂಡು ಕೇಳರಿಯದ ಭಾರೀ ದಾಖ​ಲೆ ಮಳೆಗೆ ಸಾಕ್ಷಿಯಾಗಿದ್ದು, 46 ವರ್ಷದ ದಾಖಲೆ ನಿರ್ಮಿ​ಸಿ​ದೆ. ಇದ​ರಿಂದ, ವಿಮಾನ ನಿಲ್ದಾಣ ಜಲಾ​ವೃ​ತ​ವಾಗಿ ಕೆಲ​ಕಾಲ ವಿಮಾನ ಹಾರಾಟ ಸ್ತಬ್ಧ​ವಾದ ಪ್ರಸಂಗ ನಡೆ​ದಿ​ದೆ.

ಶನಿವಾರ ಮುಂಜಾನೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 94.7 ಮಿ.ಮೀಟರ್‌ ಮಳೆ ಸುರಿದಿದೆ. ಪ್ರಸಕ್ತ ಮುಂಗಾರು ಋುತುವಿನ ಅವಧಿಯಲ್ಲಿ 1,100 ಮಿ.ಮೀಟರ್‌ ಮಳೆ ಆಗಿದ್ದು, 46 ವರ್ಷಗಳಲ್ಲೇ ಗರಿಷ್ಠ ಎನಿಸಿಕೊಂಡಿದೆ. ಈ ಮುನ್ನ 1975ರಲ್ಲಿ 1,150 ಮಿ.ಮೀಟರ್‌ ಮಳೆ ಆಗಿದ್ದು ಇದುವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಇದಕ್ಕೂ ಮುನ್ನ 2003ರಲ್ಲಿ 1,050 ಮಿ.ಮೀಟರ್‌ ಮಳೆಯಾಗಿತ್ತು.

ದೆಹಲಿಯಲ್ಲಿ ಭಾನುವಾರ ಮುಂಜಾನೆಯವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ ದೆಹಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಕಳೆದ 121 ವರ್ಷಗಳಲ್ಲಿಯೇ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. ಸೆಪ್ಟೆಂಬರ್‌ವೊಂದರಲ್ಲಿಯೇ 390 ಮಿ.ಮೀಟರ್‌ ಮಳೆ ಸುರಿದಿದೆ. ಇದು ಕೂಡ 77 ವರ್ಷಗಳ ಗರಿಷ್ಠ ಎನಿಸಿಕೊಂಡಿದೆ. 1944 ಸೆಪ್ಟೆಂಬರ್‌ನಲ್ಲಿ 417 ಮಿ.ಮೀಟರ್‌ ಮಳೆ ಆಗಿತ್ತು. ಆ ಬಳಿಕ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ. ಇನ್ನು ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1139 ಮಿ.ಮೀಟರ್‌ ಮಳೆಯಾಗಿದೆ.

ವಿಮಾನ ನಿಲ್ದಾಣ ಜಲಾವೃತ:

ಶನಿವಾರ ಸುರಿದ ಭಾರೀ ಮಳೆಯ ಪರಿಣಾಮವಾಗಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಪ್ರದೇ​ಶ​ಗಳು ಜಲಾ​ವೃ​ತ​ಗೊಂಡಿ​ದ್ದ​ವು. ಬೆಳಗ್ಗೆ 9ರವ​ರೆಗೆ ಹಾರಾಟ ಸ್ತಬ್ಧ​ವಾ​ಗಿ​ತ್ತು. ಹವಾಮಾನ ವೈಪರಿತ್ಯ ಪರಿಣಾಮ ಒಂದು ಅಂತಾರಾಷ್ಟ್ರೀಯ ವಿಮಾನ ಸೇರಿ 5 ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ದಕ್ಷಿಣ ದೆಹಲಿಯ ಮೋತಿ ಬಾಗ್‌ ಮತ್ತು ಆರ್‌ಕೆ ಪುರಂ ಮತ್ತಿತರ ಭಾಗಗಳೂ ನೀರಿನಿಂದ ಜಲಾವೃತವಾಗಿದ್ದವು. ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಭಾರೀ ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!