ಕರಾವಳಿಗೆ ಬುಲ್ ಬುಲ್ ದಾಳಿ: ಒಡಿಶಾ, ಪ.ಬಂಗಾಳದಲ್ಲಿ ಅಲರ್ಟ್

Published : Nov 09, 2019, 11:41 AM ISTUpdated : Nov 09, 2019, 05:33 PM IST
ಕರಾವಳಿಗೆ ಬುಲ್ ಬುಲ್ ದಾಳಿ: ಒಡಿಶಾ, ಪ.ಬಂಗಾಳದಲ್ಲಿ ಅಲರ್ಟ್

ಸಾರಾಂಶ

ಪಶ್ಚಿಮ ಬಂಗಾಳ, ಒಡಿಶಾಗೆ 'ಬುಲ್‌ಬುಲ್' ಚಂಡಮಾರುತ ಅಪ್ಪಳಿಸಿದೆ | ಶನಿವಾರ 135 ಕಿ.ಮಿ ವೇಗದ ಗಾಳಿ ಜತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ | 

ನವದೆಹಲಿ (ನ. 09): ಭಾರತದ ಪೂರ್ವ ಕರಾವಳಿಯಲ್ಲಿ ಆತಂಕ ಸೃಷ್ಟಿಸಿರುವ ‘ಬುಲ್ ಬುಲ್’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿ ಶಾಗೆ ಅಪ್ಪಳಿಸಲಿದೆ. ಶುಕ್ರವಾರ ದಿಂದಲೇ ಎರಡೂ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾ ಗುತ್ತಿದ್ದು, ಶನಿವಾರ 135 ಕಿ.ಮಿ ವೇಗದ ಗಾಳಿ ಜತೆ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಕೋಲ್ಕತ್ತಾ ವಿಮಾನ ನಿಲ್ದಾಣವನ್ನು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ.

 

ಒಡಿಶಾ ಪರದೀಪ್ ನಿಂದ ದಕ್ಷಿಣ-ಆಗ್ನೇಯಕ್ಕೆ 310 ಕಿ.ಮಿ ದೂರದಲ್ಲಿ ಪಶ್ಚಿಮ ಮತ್ತು ಪಕ್ಕದ ಪೂರ್ವಕೇಂದ್ರದ ಮೇಲೆ ಕೇಂದ್ರೀಕೃತ ವಾಗಿರುವ ಚಂಡ ಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿ ಕಡೆಗೆ ಸಾಗಲಿದೆ. ಶುಕ್ರವಾರ ಗಂಟೆಗೆ 13 ಕಿ.ಮಿ ವೇಗದಲ್ಲಿ ಚಲಿಸುತ್ತಿದ್ದ ಬುಲ್ ಬುಲ್ ಶನಿವಾರ ಏಕಾಏಕಿ ತೀವ್ರತೆ ಪಡೆದುಕೊಳ್ಳಲಿದ್ದು, 110 ರಿಂದ 135  ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಮುಂದಿನ ಎರಡು ದಿನಗಳಲ್ಲಿ ಕರಾವಳಿ ಹಾಗೂ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಭಾನು ವಾರ ಬಾಂಗ್ಲಾದೇಶ ಕರಾವಳಿ ಕಡೆಗೆ ಚಲಿಸಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಸೈಕ್ಲೋನ್ ಎದುರಿಸಲು ಸರ್ವ ಸಜ್ಜಾಗಿರುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶುಕ್ರವಾರದಿಂದಲೇ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಬೆಳೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ ಎಂದು ರೈತರಿಗೆ ಸೂಚಿಸಲಾಗಿದೆ. ಸೇನಾ ಪಡೆ, ವಾಯು ಪಡೆ, ಕೋಸ್ಟ್ ಗಾರ್ಡ್ ಹಾಗೂ ನೌಕಾ ಪಡೆಗೆ ಸಜ್ಜಾಗಿರುವಂತೆ ಅದೇಶ ನೀಡಲಾಗಿದೆ.

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!