ಕೊರೋನಾ ಭೀತಿ, ಮಾಸ್ಕ್ ಧರಿಸಿ ಬ್ಯಾಂಕ್ ದರೋಡೆ!

Published : Mar 18, 2020, 02:45 PM IST
ಕೊರೋನಾ ಭೀತಿ, ಮಾಸ್ಕ್ ಧರಿಸಿ ಬ್ಯಾಂಕ್ ದರೋಡೆ!

ಸಾರಾಂಶ

ಮಾಸ್ಕ್ ಧರಿಸಿ ಬ್ಯಾಂಕ್ ದರೋಡೆ ನಡೆಸಿದ ದುಷ್ಕರ್ಮಿಗಳು| ಕೊರೋನಾ ಭೀತಿ ನಡುವೆಯೂ ದರೋಡೆಕೋರರ ಕೈಚಳಕ

ಮುಜಪ್ಪರ್ಪುರ್[ಮಾ.18]: ಕೊರೋನಾ ಹರಡುವ ಭೀತಿಯಿಂದ ಇತ್ತೀಚೆಗೆ ಅಧಿಕ ಮಂದಿ ಮಾಸ್ಕ್ ಧರಿಸುತ್ತಿರುವ ದೃಶ್ಯ ಕಂಡು ಬರುತ್ತಿವೆ. ಮಾಸ್ಕ್ ಸದ್ಯ ಕೊರೋನಾದಿಂದ ರಕ್ಷಣೆ ಪಡೆಯುವುದರೊಂದಿಗೆ ಮುಖ ಮುಚ್ಚಿಕೊಳ್ಳುವ ಸಾಧನವೂ ಆಗಿದೆ. ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡ ಆರು ಮಂದಿ ದುಷ್ಕರ್ಮಿಗಳು ಆಯುಧಗಳನ್ನು ತೋರಿಸಿ SBI ಬ್ಯಾಂಕ್ ಶಾಖೆಯಿಂದ ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಹೌದು ಮುಜಫ್ಫರ್ ಪುರದ ಲಾಲೂ ಛಪ್ರಾ ಬಾಜಾರ್ ನಲ್ಲಿರುವ SBI ಬ್ಯಾಂಕ್ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಕೇವಲ 6 ನಿಮಿಷದೊಳಗೆ 6 ಮಂದಿ ದುರ್ಷರ್ಮಿಗಳು 2 ಲಕ್ಷದ 53 ಸಾವಿರ ರೂ. ದೋಚಿದ್ದಾರೆ. 

ಎರಡು ಬೈಕ್ ಗಳಲ್ಲಿ ಬಂದಿದ್ದ ಆರು ದರೋಡೆಕೋರರು ಹಣ ಲಪಟಾಯಿಸಿದ ಬಳಿಕ ಮನಿಕ್ಪುರ್ ಹೆದ್ದಾರಿ ಮೂಲಕ ಸರೈಯ್ಯಾದೆಡೆ ಪರಾರಿಯಾಗಿದ್ದಾರೆ. ಮೂವರು ಅಪರಾಧಿಗಳು ಬ್ಯಾಂಕ್ ಒಳಗೆ ಪ್ರವೇಶಿಸಿದ್ದರೆ, ಇನ್ನು ಮೂವರು ಹೊರಗೇ ನಿಂತು ಪರಿಶೀಲಿಸುತ್ತಿದ್ದರು. ಬ್ಯಾಂಕ್ ಪ್ರವೇಶಿಸಿದ್ದ ದರೋಡೆಕೋರರು ಆರಂಭದಲ್ಲಿ ಗೇಟ್ ಬಳಿ ನಿಂತಿದ್ದ ವಾಚ್ ಮ್ಯಾನ್ ನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಬ್ಬರು ಅಪರಾಧಿಗಳು ಕ್ಯಾಶ್ ಕೌಂಟರ್ ಬಳಿ ತೆರಳಿ, ಕ್ಯಾಶಿಯರ್ ಗೆ ಪಿಸ್ತೂಲ್ ತೋರಿಸಿ ಹಣ ದರೋಡೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಎಲ್ಲರೂ ತಮ್ಮ ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿರುವುದು ಸ್ಪಷ್ಟವಾಗಿದೆ.

ವೈಶಾಲಿ ಗ್ಯಾಂಗ್ ಮೇಲೆ ಪೊಲೀಸರಿಗೆ ಅನುಮಾನ

ಈ ಕುರಿತು ಮಾಹಿತಿ ನೀಡಿರುವ ಬ್ಯಾಂಕ್ ಗಾರ್ಡ್ ದುಷ್ಕರ್ಮಿಗಳು ಅಚಾನಕ್ಕಾಗಿ ಬ್ಯಾಂಕ್ ಒಳಗೆ ಪ್ರವೇಶಿಸಿದರು ಹಾಗೂ ಅವರಲ್ಲೊಬ್ಬ ನನ್ನ ತಲೆಗೆ ಪಿಸ್ತೂಲ್ ಇಟ್ಟಿದ್ದ. ಹತ್ತಿರದಲ್ಲೇ ಒಬ್ಬ ಯುವಕ ಕುಳಿತಿದ್ದ, ಆತನ ಕೈಯ್ಯಲ್ಲಿದ್ದ ಮೊಬೈಲ್ ಅವರು ಕಸಿದುಕೊಂಡಿದ್ದರು. ಆದರೆ ಹೊರ ಹೋಗುವ ವೇಳೆ ಅದನ್ನವರು ಹಿಂತಿರುಗಿಸಿದ್ದಾರೆ. ಇನ್ನು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದು, ಇಲ್ಲಿನ ವೈಶಾಲಿ ಗ್ಯಾಂಗ್ ಈ ದರೋಡೆ ನಡೆಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?