ಕೋವಿಡ್‌ ಆರ್ಭಟದಲ್ಲೂ ಶೇ.99 ಮಂದಿ ಚೇತರಿಕೆ!

Published : Apr 27, 2021, 09:36 AM IST
ಕೋವಿಡ್‌ ಆರ್ಭಟದಲ್ಲೂ ಶೇ.99 ಮಂದಿ ಚೇತರಿಕೆ!

ಸಾರಾಂಶ

ಕೋವಿಡ್‌ ಆರ್ಭಟದಲ್ಲೂ ಶೇ.99 ಮಂದಿ ಚೇತರಿಕೆ| ಮರಣ ಪ್ರಮಾಣ 1.12% ಮಾತ್ರ: ವರದಿ| ಆತಂಕಕಾರಿ ಪರಿಸ್ಥಿತಿ ನಡುವೆ ಆಶಾಕಿರಣ

ನವದೆಹಲಿ(ಏ.27): ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿದೆ. ದಿನೇದಿನೇ ಸಾವಿನ ಸಂಖ್ಯೆ ಹೊಸ ದಾಖಲೆ ಬರೆಯುತ್ತಿದೆ. ಆದರೂ ಈ ಆತಂಕಕಾರಿ ಪರಿಸ್ಥಿತಿಯಲ್ಲೂ ಆಶಾಕಿರಣ ಗೋಚರವಾಗ ತೊಡಗಿದೆ. ಸೋಂಕು, ಸಾವು ಅಧಿಕವಾಗಿದ್ದರೂ, ಚೇತರಿಕೆ ಪ್ರಮಾಣ ಶೇ.99ರಷ್ಟಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆಕ್ಸಿಜನ್‌, ಬೆಡ್‌ ಸಿಗದೆ ಜನರು ಪರದಾಡುವುದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿ ಸಾವಿಗೀಡಾಗುವುದು, ಅವರ ಅಂತ್ಯಸಂಸ್ಕಾರಕ್ಕೆ ಬಂಧುಗಳು ಪರದಾಡುವುದು, ಒಂದೇ ಕಡೆ ಹಲವು ಚಿತೆಗಳು ಹೊತ್ತಿ ಉರಿಯುತ್ತಿರುವಂತಹ ಮನಕಲಕುವ ದೃಶ್ಯಗಳು ದಿನೇದಿನೇ ವರದಿಯಾಗುತ್ತಿವೆ. ಆದರೆ ಅದೇ ಸಂದರ್ಭದಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ ಎಂದು ಆಂಗ್ಲವಾಹಿನಿಯೊಂದು ವರದಿ ಮಾಡಿದೆ.

ದೇಶದಲ್ಲಿ ಸದ್ಯ ಚೇತರಿಕೆ ಪ್ರಮಾಣ ಶೇ.98.88ರಷ್ಟಿದೆ. ಮರಣ ಪ್ರಮಾಣ ಶೇ.1.12ರಷ್ಟಿದೆ. ಅಂದರೆ ಕೋವಿಡ್‌ ಕಾಣಿಸಿಕೊಂಡವರಲ್ಲಿ ಶೇ.1.12ರಷ್ಟುಜನರು ಸಾವಿಗೀಡಾಗುತ್ತಿದ್ದಾರೆ. ಉಳಿದವರು ಕೊರೋನಾ ರೂಪಾಂತರಿ ವಿರುದ್ಧವೂ ಹೋರಾಡಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!