
ಸೂರತ್ (ಮಾ.08) ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ದೇವಸ್ಥಾನದ ಶೌಚಾಲಯದಲ್ಲಿ ಪತ್ತೆಯಾಗಿದೆ. ಯುವತಿಯರು ನಾಪತ್ತೆಯಾದ ಬೆನ್ನಲ್ಲೇ ಹುಡುಕಾಟ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೋಕೇಶನ್ ಆದರಿಸಿ ಪತ್ತೆ ಹಚ್ಚಿದ್ದಾರೆ. ಈ ಸಾವಿನ ಸುಳಿಯವನ್ನು ಯುವತಿಯರು ಬಳಸಿದ ಮೊಬೈಲ್ನಲ್ಲಿನ ಚಾಟ್ಜಿಪಿಟಿ ಎಐ ನೀಡಿದೆ. ಈ ಘಟನೆ ಗುಜರಾತ್ ಸೂರತ್ ಬಳಿ ಇರುವ ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದಿದೆ.
ರೋಶ್ನಿ ಸಿರ್ಸಾತ್ ಹಾಗೂ ಜೋಶ್ನ ಚೌಧರಿ ಎಂಬ ಇಬ್ಬರು ವಿದ್ಯಾರ್ಥಿನಿಯರ ವಯಸ್ಸು 18 ಹಾಗೂ 20. ದಿಂಡೋಲಿ ವಲಯದ ನಿವಾಸಿಗಳಾಗಿರುವ ಈ ವಿದ್ಯಾರ್ಥಿನಿಯರು ಆತ್ಮೀಯ ಸ್ನೇಹಿತರಾಗಿದ್ದರು. ಮನೆಯಿಂದ ಸ್ಕೂಟರ್ ಮೂಲಕ ಕಾಲೇಜಿಗೆ ತೆರಳಿದ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನಗೆ ಬಂದಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ನಾಪತ್ತೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಲು ಮುಂದಾಗಿದ್ದಾರೆ.
ಪೊಲೀಸರು ತಕ್ಷಣವೇ ಟವರ್ ಲೋಕೇಶನ್ ಮೂಲಕ ವಿದ್ಯಾರ್ಥಿನಿಯರ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಇದು ಆತ್ಮೀಯ ಸಂಸ್ಕಾರ ಧಾಮ ಸ್ವಾಮಿ ನಾರಾಯಣ ದೇವಸ್ಥಾನದ ಆವರಣ ತೋರಿಸಿತ್ತು. ಹೀಗಾಗಿ ಪೊಲೀಸರು ತಂಡ ನೇರವಾಗಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಬಂದಿತ್ತು. ಈ ವೇಳೆ ಯುವತಿಯರ ಸ್ಕೂಟರ್ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿತ್ತು.
ಇತ್ತ ಪೊಲೀಸರು ದೇವಸ್ಥಾನದ ಎಲ್ಲಾ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ದೇವಸ್ಥಾನದ ಶೌಚಾಲಯಕ್ಕೆ ತೆರಳಿರುವ ದೃಶ್ಯಗಳು ಲಭ್ಯವಾಗಿದೆ. ಆದರೆ ಶೌಚಾಲಯದಿಂದ ಈ ವಿದ್ಯಾರ್ಥಿಗಳು ಮರಳಿಲ್ಲ. ಹೀಗಾಗಿ ಪೊಲೀಸರು ಶೌಚಾಲಯದ ಬಳಿಕ ಬಂದು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಇಬ್ಬರು ಯುವತಿಯರು ಶವ ಪತ್ತೆಯಾಗಿದೆ.
ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರೆ, ಇತ್ತ ಯುವತಿಯರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಬಳಿಕ ಮೊಬೈಲ್ ಫೋನ್ ಪರೀಶಿಲಿಸಿದ್ದಾರೆ. ಈ ವೇಳೆ ಇಬ್ಬರು ಯುವತಿಯರು ನೋವಿಲ್ಲದೆ ಬದುಕು ಅಂತ್ಯಗೊಳಿಸುವುದು ಹೇಗೆ ಎಂದು ಚಾಟ್ಜಿಪಿಟಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಅರಿವಳಿಕೆ ಮದ್ದಿನ ಡೋಸ್ ಹೆಚ್ಚಾಗಿ ಮೃತಪಟ್ಟ ಘಟನೆಗಳ ಸುದ್ದಿಯ ಸ್ಕ್ರೀನ್ ಶಾಟ್ಕೂಟ ಮೊಬೈಲ್ನಲ್ಲಿ ಪತ್ತೆಯಾಗಿದೆ. ಇವರ ಮೃತದೇಹದ ಪಕ್ಕದಲ್ಲೇ ಅರಿವಳಿಕೆ ಮದ್ದು ಚುಚ್ಚಿಕೊಳ್ಳಳು ಬಳಸಿದ ಸಿರಿಂಜ್ ಸೇರಿದಂತ ಇತರ ವಸ್ತುಗಳು ಪತ್ತೆಯಾಗಿದೆ. ಸ್ವಯಂ ಬದುಕು ಅಂತ್ಯಗೊಳಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಚಾಟ್ಜಿಪಿಟಿ ಈ ಸುಳಿವು ನೀಡಿದೆ. ಇದೀಗ ಸಾವಿಗೆ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊನೆಯ ಕರೆ, ಸತತ ಕರೆಗಳ ಮಾಹಿತಿ, ಮೆಸೇಜ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ