ಎಜೆಎಲ್‌ ಕೇಸ್: ಮಾಜಿ ಸಿಎಂ ವಿರುದ್ಧ ದೋಷಾರೋಪ‌!

Published : Apr 17, 2021, 10:48 AM IST
ಎಜೆಎಲ್‌ ಕೇಸ್: ಮಾಜಿ ಸಿಎಂ ವಿರುದ್ಧ ದೋಷಾರೋಪ‌!

ಸಾರಾಂಶ

 ಕಾಂಗ್ರೆಸ್‌ ನಾಯಕರು ಸದಸ್ಯರಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ನಿವೇಶನ ಮರುಹಂಚಿಕೆ ಪ್ರಕರಣ| ಎಜೆಎಲ್‌ ಕೇಸ್‌: ಹರ್ಯಾಣ ಮಾಜಿ ಸಿಎಂ ವಿರುದ್ಧ ದೋಷಾರೋಪ

 

ನವದೆಹಲಿ(ಏ.17): ಕಾಂಗ್ರೆಸ್‌ ನಾಯಕರು ಸದಸ್ಯರಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ನಿವೇಶನ ಮರುಹಂಚಿಕೆ ಪ್ರಕರಣದಲ್ಲಿ ಹರಾರ‍ಯಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅವರ ವಿರುದ್ಧ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ದೋಷಾರೋಪ ದಾಖಲಿಸಿದೆ.

ವಂಚನೆ, ಕ್ರಿಮಿನಲ್‌ ಸಂಚು ಆರೋಪಗಳನ್ನು ದೋಷಾರೋಪದಲ್ಲಿ ಹೊರಿಸಲಾಗಿದೆ. ಇತ್ತೀಚೆಗೆ ನಿಧನರಾದ ಎಜೆಎಲ್‌ ಅಧ್ಯಕ್ಷ ಮೋತಿಲಾಲ್‌ ವೋರಾ ಕೂಡ ಪ್ರಕರಣದ ಆರೋಪಿ. ಈ ಕುರಿತ ವಿಚಾರಣೆ ಮೇ 7ರಿಂದ ಆರಂಭವಾಗಲಿದೆ.

ಏನಿದು ಪ್ರಕರಣ?:

ಪಂಚಕುಲದಲ್ಲಿ ಎಜೆಎಲ್‌ಗೆ 1982ರಲ್ಲಿ ನಿವೇಶನ ಹಂಚಲಾಗಿತ್ತು. ನಿಯಮದ ಪ್ರಕಾರ 10 ವರ್ಷದೊಳಗೆ ಕಟ್ಟಡ ನಿರ್ಮಾಣ ನಡೆಯದ ಕಾರಣ ದಶಕದ ಬಳಿಕ ಭೂಮಿಯನ್ನು ಸರ್ಕಾರ ವಾಪಸು ಪಡೆದಿತ್ತು. ಆದರೂ 2005ರಲ್ಲಿ ಈ ಆದೇಶ ಗಾಳಿಗೆ ತೂರಿದ ಹೂಡಾ ಸರ್ಕಾರ ಅದೇ ನಿವೇಶನವನ್ನು ಎಜೆಎಲ್‌ಗೆ ಮತ್ತೆ ನೀಡಿತ್ತು. ಹೂಡಾರ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 47 ಲಕ್ಷ ರು. ಹಾನಿಯಾಗಿದೆ ಎಂಬುದು ಸಿಬಿಐ ಆರೋಪ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!