ಸಿಎಎ ತಮಿಳರ ವಿರುದ್ಧ; ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಹೊರಗಿಡುವುದು ಸರಿಯಲ್ಲ: ಸುಪ್ರೀಂಗೆ ಡಿಎಂಕೆ ಹೇಳಿಕೆ

By BK AshwinFirst Published Nov 30, 2022, 3:33 PM IST
Highlights

ಸಿಎಎ ಕಾಯ್ದೆಯು "ತಮಿಳು ಜನಾಂಗಕ್ಕೆ ವಿರುದ್ಧವಾಗಿದೆ" ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ತಮಿಳರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂದೂ ಡಿಎಂಕೆ ಹೇಳಿದೆ.

2019 ರ ಪೌರತ್ವ (ತಿದ್ದುಪಡಿ) ಕಾಯ್ದೆಯು (Citizenship (Amendment) Act) "ನಿರಂಕುಶ" ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಏಕೆಂದರೆ ಅದು 3 ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರನ್ನು (Religious Minorities) ಮಾತ್ರ ಪರಿಗಣಿಸುತ್ತದೆ ಮತ್ತು ಶ್ರೀಲಂಕಾ ತಮಿಳರನ್ನು (Sri Lanka Tamils) ನಿರಾಶ್ರಿತರೆಂದು (Refugees) ಪರಿಗಣಿಸುತ್ತದೆ ಎಂದು ಡಿಎಂಕೆ ವಾದ ಮಾಡಿದೆ. ಕೇಂದ್ರ ಸರ್ಕಾರವು (Central Government) "ತಮಿಳು ನಿರಾಶ್ರಿತರ ಸಂಕಷ್ಟದ ಬಗ್ಗೆ ಸ್ಪಷ್ಟವಾಗಿ ಮೌನವಾಗಿದೆ. ತಮಿಳು ನಿರಾಶ್ರಿತರ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಮಲತಾಯಿಯ ವರ್ತನೆಯು ಅವರನ್ನು ಗಡೀಪಾರು ಮತ್ತು ಅನಿಶ್ಚಿತ ಭವಿಷ್ಯದ ಭಯದಲ್ಲಿ ಬದುಕುವಂತೆ ಮಾಡಿದೆ" ಎಂದು ಡಿಎಂಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮತ್ತು ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರೈಸ್ತ ಸೇರಿ 6 ಧರ್ಮಗಳಿಗೆ ಸೀಮಿತವಾಗಿರುವ ಸಿಎಎ "ನಿರಂಕುಶ" ಮತ್ತು ಮುಸ್ಲಿಂ ಧರ್ಮವನ್ನು ಸ್ಪಷ್ಟವಾಗಿ ಹೊರಗಿಡುತ್ತದೆ ಎಂದೂ ಡಿಎಂಕೆ ಹೇಳಿದೆ.
 
ಧಾರ್ಮಿಕ ಅಲ್ಪಸಂಖ್ಯಾತರನ್ನು ಪರಿಗಣಿಸುವಾಗಲೂ, ಕಿರುಕುಳದ ಕಾರಣ ಶ್ರೀಲಂಕಾದಿಂದ ಓಡಿಹೋಗಿ ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಭಾರತೀಯ ಮೂಲದ ತಮಿಳರನ್ನು ಕೇಂದ್ರವು ನಿರಾಶ್ರಿತರನ್ನಾಗಿ ಇರಿಸುತ್ತದೆ ಎಂದೂ ಸಿಎಎಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಡಿಎಂಕೆ  ಹೇಳಿದೆ. ಈ ಕಾಯ್ದೆಯು "ತಮಿಳು ಜನಾಂಗಕ್ಕೆ ವಿರುದ್ಧವಾಗಿದೆ" ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ತಮಿಳರನ್ನು ಸಿಎಎ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂದೂ ಡಿಎಂಕೆ ಹೇಳಿದೆ.

ಇದನ್ನು ಓದಿ: ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ ಹಿಂದೂ, ಸಿಖ್ಖರಿಗೆ ಪೌರತ್ವ ಕಾಯ್ದೆ, 1955ರಡಿ ಸಿಗಲಿದೆ Citizenship

"ಹಲವಾರು ದಶಕಗಳಿಂದ ತಮಿಳುನಾಡಿನಲ್ಲಿ ನೆಲೆಸಿರುವ ತಮಿಳು ನಿರಾಶ್ರಿತರು ಪೌರತ್ವ ಇಲ್ಲದ ಕಾರಣ ಮತ್ತು ನೈಸರ್ಗಿಕೀಕರಣದ ಕಾರಣದಿಂದ ಮೂಲಭೂತ ಹಕ್ಕುಗಳು ಮತ್ತು ಇತರ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂಬ ವಾಸ್ತವವನ್ನು ಸಿಎಎ ಕಾಯ್ದೆ ನಿರ್ಲಕ್ಷಿಸಿದೆ. ಮತ್ತು ಈ ಕಾಯ್ದೆಯಲ್ಲಿ ಅವರನ್ನು ಹೊರಗಿಡಲು ಯಾವುದೇ ಕಾರಣಗಳನ್ನು ಒದಗಿಸುವುದಿಲ್ಲ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್ ಭಾರತಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ.

ಅಲ್ಲದೆ, ಒಪ್ಪಂದವಿದ್ದರೂ ಸಹ ಸರ್ಕಾರಿ ಸೇವೆಗಳಲ್ಲಿ ಅಥವಾ ಸಂಘಟಿತ ಖಾಸಗಿ ವಲಯಗಳಲ್ಲಿ ಉದ್ಯೋಗ ನಿರಾಕರಿಸಲಾಗಿದೆ, ಆಸ್ತಿಯನ್ನು ಹೊಂದುವ ಹಕ್ಕು, ಮತದಾನದ ಹಕ್ಕು, ನಾಗರಿಕರು ಮತ್ತು ಇತರರಿಂದ ಪಡೆದ ಸರ್ಕಾರಿ ಸವಲತ್ತುಗಳನ್ನೂ ನಿರಾಕರಿಸಲಾಗಿದೆ. ಇಂತಹ ಅಸ್ಪಷ್ಟತೆಯಿಂದಾಗಿ, ಅವರು ಕ್ಯಾಂಪ್‌ಗಳಲ್ಲೇ ಇರುತ್ತಾರೆ. ಅಲ್ಲಿ ಅವರು ಭವಿಷ್ಯದಲ್ಲಿ ಯಾವುದೇ ಭದ್ರತೆಯ ನಿರೀಕ್ಷೆಯಿಲ್ಲದೆ ಶೋಷಣೆಗೆ ಒಳಗಾಗುತ್ತಾರೆ ಎಂದು ಡಿಎಂಕೆ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: ರಾಮ ಮಂದಿರ, ಆರ್ಟಿಕಲ್ 370 to PFI ಬ್ಯಾನ್: ಮೋದಿ ಗೆದ್ದ ಸವಾಲುಗಳ ಪಟ್ಟಿ ಹೇಗಿದೆ ಗೊತ್ತಾ?

"ಉದ್ಯೋಗಗಳ ಕೊರತೆ, ಮೂಲಭೂತ ಹಕ್ಕುಗಳು ಮತ್ತು ಸೌಕರ್ಯಗಳ ಪ್ರವೇಶವು ಈ ನಿರಾಶ್ರಿತರನ್ನು ಅಂಗವಿಕಲರನ್ನಾಗಿ ಮತ್ತು ದಿಗ್ಭ್ರಮೆಗೊಳಿಸಿದೆ. ಈ ನಿರಾಶ್ರಿತರು ಭಾರತ-ಶ್ರೀಲಂಕಾ ಒಪ್ಪಂದಗಳಿಂದ ಕಿರುಕುಳದಿಂದ ನಾವು ರಕ್ಷಣೆಗೊಳಗಾಗುತ್ತೇವೆ, ಉಜ್ವಲ ಭವಿಷ್ಯವನ್ನು ಹೊಂದಬಹುದು, ತಾರತಮ್ಯ ಮುಕ್ತ ವಾತಾವರಣ ಎಂಬ ಭರವಸೆಯೊಂದಿಗೆ ತಮ್ಮ ಮೂಲದ ದೇಶಕ್ಕೆ ಅಂದರೆ ಭಾರತಕ್ಕೆ ಆಗಮಿಸಿದ್ದಾರೆ. ಆದರೆ, ಅವರ ಜೀವನ ಮಟ್ಟಗಳು ಈಗ ಮೊದಲಿಗಿಂತ ಕೆಟ್ಟ ಸ್ಥಿತಿಯಲ್ಲಿವೆ. ನಿರಾಶ್ರಿತರ ಶಿಬಿರಗಳಲ್ಲಿ ವರ್ಷಗಳನ್ನು ಕಳೆದಿರುವ ಈ ತಮಿಳು ನಿರಾಶ್ರಿತರು ಪೌರತ್ವಕ್ಕಾಗಿ ಮಾಡಿದ ವಿನಂತಿಗಳು ಕೇಂದ್ರದ ಕಿವಿಗೆ ಬಿದ್ದಿದ್ದರೂ ಕಿವುಡಾಗಿದೆ" ಎಂದೂ ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಇನ್ನು, ಸಿಎಎ ಕಾಯ್ದೆಯು ಧರ್ಮದ ಆಧಾರದ ಮೇಲೆ ಪೌರತ್ವದ ಅನುದಾನ/ಅನುದಾನಕ್ಕೆ ಸಂಪೂರ್ಣವಾಗಿ ಹೊಸ ಆಧಾರವನ್ನು ಪರಿಚಯಿಸುತ್ತದೆ, ಇದು "ಜಾತ್ಯತೀತತೆಯ ಮೂಲವನ್ನು ನಾಶಪಡಿಸುತ್ತದೆ". ಈ ಕಾಯ್ದೆಯು ಉದ್ದೇಶಪೂರ್ವಕವಾಗಿ 6 ದೇಶಗಳಲ್ಲಿ ಕಿರುಕುಳ ಅನುಭವಿಸಿದ ಮುಸ್ಲಿಮರನ್ನು ದೂರವಿಡುತ್ತದೆ ಮತ್ತು ಆದ್ದರಿಂದ ಇದು ಅತ್ಯಂತ ತಾರತಮ್ಯ ಮತ್ತು ಸ್ಪಷ್ಟವಾಗಿ ನಿರಂಕುಶವಾಗಿದೆ ಎಂದು ಡಿಎಂಕೆ ಹೇಳಿದೆ.

ಇದನ್ನು ಓದಿ: ದೇಶದ ಜಾತ್ಯಾತೀತತೆಗೆ ಸಿಎಎ ವಿರುದ್ಧ ಎಂದ ಸಿಎಂ ಪಿಣರಾಯಿ!

ಒಟ್ಟಾರೆ, ಸಿಎಎ ವಿರುದ್ಧ ಕನಿಷ್ಠ 220 ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿವೆ. ಡಿಸೆಂಬರ್ 11, 2019 ರಂದು ಸಿಎಎ ಅನ್ನು ಸಂಸತ್ತು ಅಂಗೀಕರಿಸಿತು ಮತ್ತು ಇದು ದೇಶಾದ್ಯಂತ ಪ್ರತಿಭಟನೆಗಳನ್ನು ಎದುರಿಸಿದ್ದರೂ, 10 ಜನವರಿ 2020 ರಂದು ಜಾರಿಗೆ ಬಂದಿದೆ. 

click me!