ಮಮತಾಗೆ ಮತ್ತೆ ಶಾಕ್‌: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!

Published : Mar 09, 2021, 07:49 AM IST
ಮಮತಾಗೆ ಮತ್ತೆ ಶಾಕ್‌: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!

ಸಾರಾಂಶ

ಚುನಾವಣೆ ನಿರತ ಪಶ್ಚಿಮ ಬಂಗಾಳದಲ್ಲಿ ಶಾಸಕರ ವಲಸೆ| ಮಮತಾಗೆ ಮತ್ತೆ ಶಾಕ್‌: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!

ಕೋಲ್ಕತಾ(ಮಾ.09): ಚುನಾವಣೆ ನಿರತ ಪಶ್ಚಿಮ ಬಂಗಾಳದಲ್ಲಿ ಶಾಸಕರ ವಲಸೆ ಮುಂದುವರಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿರುವ ಕಾರಣಕ್ಕೆ ತೃಣಮೂಲ ಕಾಂಗ್ರೆಸ್‌ನ ಐವರು ಶಾಸಕರು ಪಕ್ಷ ತೊರೆದು ಸೋಮವಾರ ಬಿಜೆಪಿಗೆ ಸೆರ್ಪಡೆ ಆಗಿದ್ದಾರೆ.

ಈ ಮೂಲಕ ಮಾಲ್ಡಾ ಜಿಲ್ಲಾ ಪರಿಷದ್‌ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿರುವ ಸೊನಾಲಿ ಗುಹಾ, ಸಿಂಗೂರು ಚಳವಳಿಯ ಪ್ರಮುಖ ಮುಖವಾಗಿದ್ದ ರಬೀಂದ್ರನಾಥ್‌ ಬಟ್ಟಾಚಾರ್ಯ, 4 ಬಾರಿ ಶಾಸಕರಾಗಿರುವ ಜತು ಲಾಹಿರಿ, ಮಾಜಿ ಫುಟ್ಬಾಲ್‌ ಆಟಗಾರ ದಿಪೇಂದು ಬಿಸ್ವಾಸ್‌ ಹಾಗೂ ಶಾಸಕ ಸಿತಾಲ್‌ ಸರ್ದಾರ್‌ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಪಶ್ಚಿಮ ಬಂಗಾ​ಳ​ದಲ್ಲಿ ಬಿಜೆಪಿ ಜಯ​ಭೇ​ರಿ​ಯಾ​ದರೂ ಅಧಿ​ಕಾರ ಇಲ್ಲ

ಪಂಚ​ರಾ​ಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆಯ ಮೊದಲ ಹಂತದ ಚುನಾ​ವಣೆ ದಿನಾಂಕ ಹತ್ತಿ​ರ​ವಾ​ಗು​ತ್ತಿ​ರುವ ಬೆನ್ನ​ಲ್ಲೇ, ಟೈಮ್ಸ್‌ ನೌ, ಸಿ​- ವೋಟರ್‌ ಚುನಾ​ವಣಾ ಪೂರ್ವ ಸಮೀಕ್ಷೆಯೊಂದನ್ನು ನಡೆಸಿವೆ. ಸಮೀಕ್ಷೆ ಅನ್ವಯ ಪಶ್ಚಿಮ ಬಂಗಾ​ಳ​ದಲ್ಲಿ ಅಧಿ​ಕಾ​ರದ ಗದ್ದುಗೆ ಹಿಡಿ​ಯಲು ಶತಾ​ಯ​ಗ​ತಾಯ ಯತ್ನಿ​ಸು​ತ್ತಿ​ರುವ ಬಿಜೆ​ಪಿಯು ಒಟ್ಟು 294 ವಿಧಾ​ನ​ಸಭೆ ಕ್ಷೇತ್ರ​ಗಳ ಪೈಕಿ ಭರ್ಜರಿ 107 ಕ್ಷೇತ್ರ​ಗ​ಳಲ್ಲಿ ಜಯ​ಭೇರಿ ಬಾರಿ​ಸ​ಲಿದೆ. ಇನ್ನು ಯಾವುದೇ ಕಾರ​ಣಕ್ಕೂ ಕೇಸ​ರಿಯ ಅಲೆ​ ಬಂಗಾ​ಳಕ್ಕೆ ಸುಳಿ​ಯಲು ಬಿಡಲ್ಲ ಎಂಬ ಪಣ​ತೊ​ಟ್ಟಿ​ರುವ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ನೇತೃ​ತ್ವದ ಟಿಎಂಸಿ 154 ಸ್ಥಾನ​ಗ​ಳನ್ನು ಗೆದ್ದು, ಅಧಿ​ಕಾ​ರ​ದಲ್ಲಿ ಮುಂದು​ವ​ರಿ​ಯ​ಲಿದೆ. ತನ್ಮೂ​ಲಕ ಟಿಎಂಸಿ ಸರಳ ಬಹು​ಮತ ಗಳಿ​ಸ​ಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು