ಶಶಿಕಲಾ ಆಪ್ತರ ಆಸ್ತಿ ಜಪ್ತಿ: ಚೆನ್ನೈ ತಲುಪುವ ಮುನ್ನವೇ ತಮಿಳ್ನಾಡು ಸರ್ಕಾರ ಶಾಕ್‌!

Published : Feb 08, 2021, 08:42 AM IST
ಶಶಿಕಲಾ ಆಪ್ತರ ಆಸ್ತಿ ಜಪ್ತಿ: ಚೆನ್ನೈ ತಲುಪುವ ಮುನ್ನವೇ ತಮಿಳ್ನಾಡು ಸರ್ಕಾರ ಶಾಕ್‌!

ಸಾರಾಂಶ

 ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಸೆರೆವಾಸ ಅನುಭವಿಸಿದ ಮಾಜಿ ಸಿಎಂ ಜಯಲಲಿತಾರ ಆಪ್ತೆ ಶಶಿಕಲಾ| ಶಶಿಕಲಾ ಆಪ್ತರ ಆಸ್ತಿ ಜಪ್ತಿ| ಚೆನ್ನೈ ತಲುಪುವ ಮುನ್ನವೇ ತಮಿಳ್ನಾಡು ಸರ್ಕಾರ ಶಾಕ್‌!

ಚೆನ್ನೈ(ಫೆ.08): ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಸೆರೆವಾಸ ಅನುಭವಿಸಿದ ಮಾಜಿ ಸಿಎಂ ಜಯಲಲಿತಾರ ಆಪ್ತೆ ಶಶಿಕಲಾ ಅವರು ತಮಿಳುನಾಡಿಗೆ ಸೋಮವಾರ ಆಗಮಿಸುತ್ತಿದ್ದಾರೆ. ಇದಕ್ಕೆ ಕೆಲವೇ ತಾಸು ಮುನ್ನ ಭಾನುವಾರ ಅವರ ಆಪ್ತರಾದ ಜೆ. ಇಳವರಸಿ ಮತ್ತು ವಿ. ಎನ್‌. ಸುಧಾಕರನ್‌ ಅವರ ಆಸ್ತಿಯನ್ನು ತಮಿಳುನಾಡು ಸರ್ಕಾರ ಜಪ್ತಿ ಮಾಡಿದೆ.

2017ರ ಸುಪ್ರೀಂ ಕೋರ್ಟ್‌ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ತನ್ಮೂಲಕ ಶಶಿಕಲಾ ಅವರಿಗೆ ಶಾಕ್‌ ನೀಡಿದೆ.

ಈವರೆಗೆ ಕೊರೋನಾ ಕಾರಣಕ್ಕೆ ದೇವನಹಳ್ಳಿಯ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಶಶಿಕಲಾ ಅವರು ಸೋಮವಾರ ರಸ್ತೆ ಮಾರ್ಗವಾಗಿ ಚೆನ್ನೈಗೆ ಆಗಮಿಸಲಿದ್ದಾರೆ. ಇದರ ಹಿಂದಿನ ದಿನವಾದ ಭಾನುವಾರ ಶಶಿಕಲಾರ ಆಪ್ತರಿಗೆ ಸೇರಿದ ಚೆನ್ನೈನಲ್ಲಿರುವ 6 ಸಾವಿರ ಚದರ ಅಡಿಯ ಜಾಗ ಮತ್ತು 4300 ಚದರಡಿಯಲ್ಲಿ ನಿರ್ಮಿಸಲಾದ ಕಟ್ಟಡ ಸೇರಿ ಇನ್ನಿತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್