ಆಮ್ಲಜನಕದ ಬೆಡ್‌ ಬಿಕ್ಕಟ್ಟು: ಮಾರ್ಗ ಮಧ್ಯೆ ಸೋಂಕಿತೆ ಸಾವು!

Published : Apr 05, 2021, 11:31 AM ISTUpdated : Apr 05, 2021, 12:02 PM IST
ಆಮ್ಲಜನಕದ ಬೆಡ್‌ ಬಿಕ್ಕಟ್ಟು: ಮಾರ್ಗ ಮಧ್ಯೆ ಸೋಂಕಿತೆ ಸಾವು!

ಸಾರಾಂಶ

ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿರುವ ಪುಣೆಯಲ್ಲಿ ಆಸ್ಪತ್ರೆಯ ಆಮ್ಲಜನಕ ಬೆಡ್‌ ಲಭ್ಯವಾಗದ ಹಿನ್ನೆಲೆ| ಮಾರ್ಗ ಮಧ್ಯೆ ಸೋಂಕಿತೆ ಸಾವು!

ಮುಂಬೈ(ಏ.05): ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿರುವ ಪುಣೆಯಲ್ಲಿ ಆಸ್ಪತ್ರೆಯ ಆಮ್ಲಜನಕ ಬೆಡ್‌ ಲಭ್ಯವಾಗದ ಹಿನ್ನೆಲೆಯಲ್ಲಿ 73 ವರ್ಷದ ವೃದ್ಧೆಯೊಬ್ಬರು ಕಾರಿನಲ್ಲೇ ಸಾವಿಗೀಡಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಕೊರೋನಾಕ್ಕೆ ತುತ್ತಾಗಿದ್ದ ವೃದ್ಧೆಯನ್ನು ಆಸ್ಪತ್ರೆಯ ಆಮ್ಲಜನಕದ ಸೌಲಭ್ಯ ಹೊಂದಿದ ಬೆಡ್‌ನಲ್ಲಿ ದಾಖಲಿಸಲು ಅವರ ಪುತ್ರ 15 ಗಂಟೆಗಳ ಕಾಲ ಕಾರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಆಮ್ಲಜನಕದ ಬೆಡ್‌ಗಳ ಕೊರತೆಯಿಂದಾಗಿ ಯಾವುದೇ ಆಸ್ಪತ್ರೆಗಳು ವೃದ್ಧೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ತಮ್ಮ ತಾಯಿ ಕಾರಿನಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಆಕೆಯ ಪುತ್ರ ಕಣ್ಣೀರಿಟ್ಟಿದ್ದಾರೆ.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯಿಸಿದ ಪುಣೆಯ ಪಾಲಿಕೆ ಅಧಿಕಾರಿಗಳು, ಆಸ್ಪತ್ರೆಗೆ ದಾಖಲಿಸಿಕೊಳ್ಳದ್ದರಿಂದ ಮಾರ್ಗಮಧ್ಯೆಯೇ ವೃದ್ಧೆ ಸಾವಿಗೀಡಾದ ಘಟನೆ ಬಗ್ಗೆ ಗೊತ್ತಿಲ್ಲ. ಆದರೆ ಪುಣೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಎದುರಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಸೋಮವಾರದ ಒಳಗಾಗಿ ಸೋಂಕಿತರ ಗುಣಮುಖಕ್ಕಾಗಿ ಹೆಚ್ಚಿನ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?