ಸಿಎಂಗೆ ಕೊರೋನಾ: ಯಾರನ್ನೆಲ್ಲಾ ಭೇಟಿಯಾಗಿದ್ರು, ಯಾರೆಲ್ಲಾ ಕ್ವಾರಂಟೈನ್ ಆದ್ರು...?

First Published Aug 3, 2020, 3:09 PM IST

ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇತ್ತೀಚೆಗೆ ಬಿಎಸ್ ವೈ ಸಂಪರ್ಕಕ್ಕೆ ಬಂದ ರಾಜ್ಯ ನಾಯಕರಿಗೆ ಆತಂಕ ಎದುರಾಗಿದೆ. ಸ್ವತಃ ಸಿಎಂ ಬಿಎಸ್ ವೈ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದಾರೆ.  ಕಳೆದ ಕೆಲವು ದಿನಗಳಿಂದ ಸಿಎಂ ಯಡಿಯೂರಪ್ಪ ಅವರು ಎಲ್ಲಿಗೆಲ್ಲಾ ಭೇಟಿ ನೀಡಿದ್ದರು, ಯಾರನ್ನೆಲ್ಲಾ ಭೇಟಿಯಾಗಿದ್ದರು. ಯಾರೆಲ್ಲಾ ಕ್ವಾರಂಟೈನ್ ಆಗಿದ್ದಾರೆ ಎನ್ನುವದರ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮಣಿಪಾಲ್‌ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಇನ್ನು ಇವರ ಸಂಪರ್ಕದಲ್ಲಿದ್ದವರು ಯಾರೆಲ್ಲ ಕ್ವಾರಂಟೈನ್ ಆಗಿದ್ದಾರೆ ಎನ್ನುವುದನ್ನು ಮುಂದೆ ನೋಡಿ
undefined
ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಕರೋನಾ ಪಾಸಿಟಿವ್ ದೃಡ ಪಟ್ಟಿದೆ. ಅವರು ಆದಷ್ಟು ಶೀಘ್ರದಲ್ಲಿ ಗುಣಮುಖರಾಗಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ. ಮುಖ್ಯಮಂತ್ರಿಗಳನ್ನು ನಾನು 30-7-2020 ಕಳೆದ ಗುರುವಾರ ಮೆಟ್ರೊ ಉದ್ಘಾಟನೆಯ ವೇಳೆ ಭೇಟಿಯಾಗಿದ್ದೆ. ಈವರೆಗೆ ನನಗಾಗಲಿ, ನನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಗಾಗಲಿ ಕರೋನಾದ ಯಾವ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಮುಂಜಾಗ್ರತೆಯ ದೃಷ್ಟಿಯಿಂದ ನಾನು ಸ್ವಯಂ ಕ್ವಾರಂಟೈನ್ ಆಗಲಿದ್ದೇನೆ...ಆರ್ ಅಶೋಕ್ ಕಂದಾಯ ಸಚಿವ ..
undefined
ಉಪಮುಖ್ಯಮಂತ್ರು ಗೋವಿಂದ್ ಕಾರಜೋಳ ಅವರ ವರದಿನೆಗೆಟಿವ್ ಬಂದ್ರು ಸಹ ಮುಂಜಾಗೃತವಾಗಿ ಮೂರ್ನಾಲ್ಕು ದಿನ ಸೆಲ್ಫ್ ಕ್ವಾರಂಟೈನ್ ಆಗುತ್ತೇನೆ ಎಂದು ಹೇಳಿದ್ದಾರೆ....
undefined
ಸಿಎಂ ಸಂಪರ್ಕದಲ್ಲಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
undefined
ಪುತ್ರ ಬಿವೈ ವಿಜಯೇಂದ್ರ ಸಹ ಸೆಲ್ಫ್ ಹೋಮ್ ಕ್ವಾರಂಟೈನ್ ಆಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.
undefined
ಕಳೆದ ಮೂರು ದಿನಗಳ ಹಿಂದೆ ಬಿಎಸ್‌ವೈ ರಾಜ್ಯಪಾಲ ವಜೂಭಾಯಿ ವಾಲಾರವರನ್ನು ಭೇಟಿ ಮಾಡಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ, ಕೊರೋನಾ ಸಾಂಕ್ರಾಮಿಕದ ಸ್ಥಿತಿಗತಿ, ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಗೃಹ ಸಚಿವ ಬಸವಾರಜ್ ಬೊಮ್ಮಾಯಿ ಉಪಸ್ಥಿತರಿದ್ದರು.
undefined
ಜುಲೈ 31ರಂದು ಯಡಿಯೂರಪ್ಪ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ (NEP) ಅಧ್ಯಕ್ಷರಾದ, ಹಿರಿಯ ವಿಜ್ಞಾನಿ ಶ್ರೀ ಕಸ್ತೂರಿ ರಂಗನ್ ಅವರನ್ನು ಭೇಟಿಯಾಗಿ‌ ಅಭಿನಂದನೆ ಸಲ್ಲಿಸಿದ್ದರು.
undefined
ಜುಲೈ 30ರಂದು ಯಡಿಯೂರಪ್ಪ ಅವರು,ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರಿಕೆ ಇಲಾಖೆಯ 2013-14 ರಿಂದ 2018-19 ರವರೆಗಿನ ಮಾಹಿತಿನ್ನೊಳಗೊಂಡ ಅಂಕಿ-ಅಂಶಗಳ ಸಂಚಿಕೆಯನ್ನು‌ ಬಿಡುಗಡೆ‌ ಮಾಡಿದ್ದರು.
undefined
ಜುಲೈ30ರಂದು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಶಾಂತಾರಾಮ್‌ ಸಿದ್ದಿ ಅವರು ಸಿಎಂ ಭೇಟಿಯಾಗಿದ್ದರು.
undefined
ಜುಲೈ30ರಂದು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತಳವಾರ್ ಸಾಬಣ್ಣಅವರು ಸಿಎಂ ಭೇಟಿಯಾಗಿದ್ದರು.
undefined
ಮೂರು ದಿನಗಳ ಹಿಂದೆ ಸಿಎಂ ಬಿಎಸ್'ವೈ ಸಂಪರ್ಕಕ್ಕೆ ಬಂದಿದ್ದ ಮಾಜಿ ಸಚಿವ ಜೀವರಾಜ್ ಕ್ವಾರಂಟೈನ್ ಆಗಿದ್ದಾರೆ.
undefined
click me!