ಎಲೆಯಲ್ಲಿ ಬಿಎಸ್‌ವೈ ಚಿತ್ರ: ಕಲಾವಿದನಿಗೆ ಸಿಎಂ ಬಂಪರ್ ಗಿಫ್ಟ್..!

First Published Sep 27, 2020, 7:43 PM IST

ಎಲೆಗಳ ಮೇಲೆ ಚಿತ್ರ ಮೂಡಿಸುವ (ಲೀಫ್‌ ಆರ್ಟ್‌) ಕಲೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷಯ್‌ ಎಂ. ಕೋಟ್ಯಾನ್‌ ಅವರು ಬಿ ಎಸ್ ಯಡಿಯೂರಪ್ಪ ಅವರ ಚಿತ್ರವನ್ನು ಅಶ್ವತ್ಥ ವೃಕ್ಷದ ಎಲೆಯಲ್ಲಿ  ಚಿತ್ರಿಸಿ  ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಖುದ್ದು ಸಿಎಂ ಭೇಟಿಯಾಗಿ ಬಿಡಿಸಿದ ಚಿತ್ರವನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ಕಲಾವಿದನಿಗೆ ಬಂಪರ್ ಬಹುಮಾನವನ್ನು ಸಹ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷಯ್‌ ಎಂ. ಕೋಟ್ಯಾನ್‌ ಅವರು ಬಿ ಎಸ್ ಯಡಿಯೂರಪ್ಪ ಅವರ ಚಿತ್ರವನ್ನು ಅಶ್ವತ್ಥ ವೃಕ್ಷದ ಎಲೆಯಲ್ಲಿ ಚಿತ್ರಿಸಿ ಉಡುಗೊರೆಯಾಗಿ ನೀಡಿದ್ದಾರೆ.
undefined
ಅಶ್ವತ್ಥ ವೃಕ್ಷದ ಎಲೆಯಲ್ಲಿ ತಮ್ಮ ಫೋಟೋ ವೀಕ್ಷಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ
undefined
ಶಾಸಕ ಹರೀಶ್ ಪುಂಜಾ ಅವರು ಎಲೆಯಲ್ಲಿ ಬಿಡಿಸಿದ ಚಿತ್ರವನ್ನು ತೋರಿಸುತ್ತಿರುವ ದೃಶ್ಯ
undefined
ಅಕ್ಷಯ್ ಕೋಟ್ಯಾನ್ ಅವರ ವಿಶಿಷ್ಟ ಪ್ರತಿಭೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮೆಚ್ಚುಗೆಯ ಮಾತುಗಳನ್ನಾಡಿ ಮುಂದಿನ ವಿದ್ಯಭ್ಯಾಸಕ್ಕಾಗಿ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ನೀಡಿ ಆಶೀರ್ವದಿಸಿದರು.
undefined
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಚಿತ್ರವನ್ನು ಅಶ್ವತ್ಥ ಎಲೆಗಳಲ್ಲಿ ಮೂಡಿಸುವ ಮೂಲಕ ಪ್ರಶಂಸೆಗೆ ಪಾತ್ರರಾದ್ದ ಅಕ್ಷಯ್‌ ಎಂ. ಕೋಟ್ಯಾನ್‌
undefined
ಕಾಗದದ ಮೂಲಕ ಚಿತ್ರ ಆರಂಭಿಸಿದ ಇವರು ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ (ಲೀಫ್‌ ಆರ್ಟ್‌) ಯಶಸ್ವಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಡಾ| ಹೆಗ್ಗಡೆ, ನಾರಾಯಣಗುರು, ಬೆಳ್ತಂಗಡಿ ಶಾಶಕ ಹರೀಶ್‌ ಪೂಂಜ ಸಹಿತ ಶಾಸಕರನೇಕರ ಚಿತ್ರ, ಸಿನೆಮಾ ನಟರು, ದೇವರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.
undefined
click me!