ದತ್ತ ಜಯಂತಿ ಅಂಗವಾಗಿ ಇಡೀ ನಗರ ಬಂಟಿಂಗ್, ಬ್ಯಾನರ್, ಭಗವಾಧ್ವಜಗಳಿಂದ ಕೇಸರಿಮಯವಾಗಿದೆ. ಶ್ರೀರಾ, ಆಚಿಜನೇಯ, ದತ್ತಾತ್ರೇಯರು ಸೇರಿದಂತೆ ಬಿಜೆಪಿ ಮುಖಂಡರುಗಳ ಕಟೌಟ್ಗಳು ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿವೆ.ಹನುಮಂತಪ್ಪ ವೃತ್ತ, ಆಜಾದ್ ವೃತ್ತ ಸೇರಿದಂತೆ ಹಲವೆಡೆಗಳಲ್ಲಿ ಕೇಸರಿ ಬಂಟಿಂಗ್ಗಳ ಜೊತೆಗೆ ಆಕರ್ಷಕವಾದ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಇಡೀ ನಗರವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ.