ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ ಅಲ್ಪಸಂಖ್ಯಾತ ಮುಖಂಡರು; ಅಧಿಕೃತವಾಗಿ BJP ಸೇರ್ಪಡೆ

Published : May 03, 2026, 05:55 PM IST

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ, ಶಾಸಕ ಸಿದ್ದು ಸವದಿ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಕಾಂಗ್ರೆಸ್ ದುರಾಡಳಿತ, ಬೆಲೆ ಏರಿಕೆ ಮತ್ತು ಅಲ್ಪಸಂಖ್ಯಾತರಿಗೆ ಸಹಕಾರವಿಲ್ಲದಿರುವುದೇ ಪಕ್ಷ ತೊರೆಯಲು ಕಾರಣವೆಂದು ಅವರು ತಿಳಿಸಿದ್ದಾರೆ.

PREV
16
ತೇರದಾಳ ವಿಧಾನಸಭಾ ಕ್ಷೇತ್ರ

ತೇರದಾಳ ವಿಧಾನಸಭಾ ಕ್ಷೇತ್ರದ ಕುಲಹಳ್ಳಿ ಗ್ರಾಮದಲ್ಲಿ ಶಾಸಕ ಸಿದ್ದು ಸವದಿ ಉಪಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಅಲ್ಪಸಂಖ್ಯಾತ ಸಮುದಾಯದ 50ಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ಅನೇಕ ಸಂಘಟನೆ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

26
ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಹಾಗೂ ಗ್ಯಾರಂಟಿಗಳ ಗೋಜಿನಲ್ಲಿ ದೈನಂದಿನ ಬೆಲೆ ಗಗನಕ್ಕೇರುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದಲ್ಲದೇ ತೇರದಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸಮರ್ಪಕ ಸಹಕಾರವಿಲ್ಲದ ಕಾರಣ ಬಿಜೆಪಿಗೆ ಸೇರ್ಪಡೆಯಾಗುವುದು ಅನಿವಾರ್ಯವಾಯಿತು ಎಂದು ಪಿಕೆಪಿಎಸ್ ಅಧ್ಯಕ್ಷ ನಸರುದ್ದೀನ್ ಸಂತಿ ಹೇಳಿದರು.

36
ಶಾಸಕ ಸಿದ್ದು ಸವದಿ

ಶಾಸಕ ಸಿದ್ದು ಸವದಿ ಮಾತನಾಡಿ, ಈಗಿನ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬಡವರಿಗಾಗಿ ಒಂದು ಮನೆ ಕೂಡ ಮಂಜೂರಾಗಿಲ್ಲ. ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಪಕ್ಷ ಸಂಘಟನೆ ಬಲಪಡಿಸುವ ದಿಸೆಯಲ್ಲಿ ಈ ಸೇರ್ಪಡೆ ಮಹತ್ವದ್ದಾಗಿದೆ ಎಂದರು.

46
ಬಿಜೆಪಿ ಸೇರಿದ ನಾಯಕರು

ಕುಲಹಳ್ಳಿ ಗ್ರಾಮದ ನಸರುದ್ದೀನ್ ಸಂತಿ, ಹಣಮಂತ ಕಂಕಣವಾಡಿ, ಬಸಪ್ಪ ಬಿಳ್ಳೂರ ನೇತೃತ್ವದಲ್ಲಿ ಹಣಮಂತ ಜಕಾತಿ, ಮಹ್ಮದ್ ಕಾಲಿಖಾನ್, ಮೈಬೂಬ್‌ ಸಂತಿ, ಹಾಜಿಸಾಬ್‌ ಹಳಿಂಗಳಿ, ಗುಲಾಬ್‌ ಅಪರಾಜ, ಮಹಾದೇವ ಗಸ್ತಿ, ಆದಂ ಸಂತಿ, ಹುಮಾಯೂನ್ ಸಂತಿ, ಆಸೀಫ್ ಸಂತಿ, ಲಾಲಸಾಬ್‌ ಸನದಿ, ಸಲೀಂ ಸಂತಿ, ಇಮಾಮ್‌ ಸಂತಿ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಗೊಂಡರು.

56
ಹಲವರ ಉಪಸ್ಥಿತಿ

ಪಕ್ಷದ ಮುಖಂಡರಾದ ಗಿರಮಲ್ಲಪ್ಪ ಕೆರೂರ, ಚಂದ್ರಯ್ಯ ಮಠಪತಿ, ಹೊಳಬಸಪ್ಪ ಜಂಬಗಿ, ಶಿವಪ್ಪ ಬಾಗಲಕೋಟ, ಹಣಮಂತ ತೇಲಿ, ಕಲ್ಲಪ್ಪ ಕಂಕಣವಾಡಿ, ಚಿನ್ನಪ್ಪ ಕಂಕಣವಾಡಿ, ವಿಠ್ಠಲ ಅಡಗಲಿ, ಚನ್ನಪ್ಪ ನಿಂಬರಗಿ, ಮಹಾದೇವ ಕಾತ್ರಾಳ, ಸಿದ್ದಪ್ಪ ನಿಂಬರಗಿ, ಶಿವಲಿಂಗಪ್ಪ ಪಾಯಗೊಂಡ, ಮುತ್ತಪಪ್ ಕಂಕಣವಾಡಿ, ಭಾರತಿ ಗಸ್ತಿ, ಶ್ರೀಶೈಲ ಮಗದುಮ್, ಮುತ್ತಪ್ಪ ಸವದಿ, ಬಸಯ್ಯ ಪೂಜಾರಿ, ಶಿವಲಿಂಗ ಕಾಲತಿಪ್ಪಿ, ಚಿದಾನಂದ ಕಾಂಬಳೆ, ಲಲಿತಾ ಮೊಳೆ ಉಪಸ್ಥಿತರಿದ್ದರು.

66
ಸಿದ್ದು ಸವದಿ ಪೋಸ್ಟ್

ಕುಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನಸರುದ್ದೀನ್ ಸಂತಿ ಹಾಗೂ ಉಪಾಧ್ಯಕ್ಷರಾದ ಹಣುಮಂತ ಜಕಾತಿ ಅವರು ಹಾಗೂ ಅವರ ಬೆಂಬಲಿಗರೊಂದಿಗೆ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು ಎಂದು ಶಾಸಕ ಸಿದ್ದು ಸವದಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Read more Photos on
click me!

Recommended Stories