ಗಂಗಾವತಿ: ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಭ್ಯರ್ಥಿ ಪರ ಪ್ರಚಾರ, ಅಜೀವ ಸದಸ್ಯರ ಆಕ್ರೋಶ

First Published Mar 15, 2021, 12:29 PM IST

ಗಂಗಾವತಿ(ಮಾ.15): ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ನಡೆದ ಗಂಗಾವತಿ ತಾಲೂಕ 7ನೇ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲಿ ಕಸಾಪ ರಾಜ್ಯ ಅಭ್ಯರ್ಥಿ ಶೇಖರಗೌಡ ಮಾಲೀಪಾಟೀಲ್ ಪರ ಅವರ ಬೆಂಬಲಿಗರೊಬ್ಬರು ಬಿತ್ತಿ ಪತ್ರಗಳನ್ನು ಅತಿಥಿಗಳಿಗೆ ವಿತರಿಸಿರುವುದು ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.  

ಜಂಗಮರ ಕಲ್ಗುಡಿ ಗ್ರಾಮದಲ್ಲಿ ಚಿದಾನಂದ ಅವಧೂತರ ಮಹಾಮಂಟಪದಲ್ಲಿ ಇಂದು(ಸೋಮವಾರ) ನಡೆದ 2ನೇ ದಿನದ ಸಮ್ಮೇಳನದಲ್ಲಿ ಕವಿಗೋಷ್ಠಿಯ ವೇದಿಕೆಯಲ್ಲಿ ಬೆಂಗಳೂರಿನ ಶೇಖರಗೌಡ ಬೆಂಬಲಿಗ ಮಹೇಶ ಎಂಬುವರು ವೇದಿಕೆ ಮೇಲೆ ಇರುವ ಅತಿಥಿಗಳಿಗೆ ಚುನಾವಣೆಯ ಕರ ಪತ್ರಗಳನ್ನು ವಿತರಿಸುವ ಮೂಲಕ ಪ್ರಚಾರವನ್ನ ನಡೆಸಿದ್ದಾರೆ.
undefined
ವೇದಿಕೆ ಮುಂದೆ ಕುಳಿತು ಪ್ರಚಾರ ನಡೆಸಿದ ಶೇಖರಗೌಡ
undefined

Latest Videos


ಇದರಿಂದ ಪರಿಷತ್ ನಿಯಮ ಉಲ್ಲಂಘನೆ ಮಾಡಿದ್ದಲ್ಲದೆ ವೇದಿಕೆಗೆ ಅಗೌರವ ಉಂಟಾಗಿ ಅಭಾಸವಾಯಿತು.
undefined
ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾದ ಪ್ರಚಾರ
undefined
ವೇದಿಕೆಯನ್ನು ಚುನಾವಣೆ ಉಪಯೋಗಿಸುವದಿಲ್ಲ ಎನ್ನುವ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
undefined
click me!